ಪ್ರೀಯ ರೈತರೇ ಇವತ್ತು ನಾವು ಒಬ್ಬ ಇಂಜಿನಿಯರಿಂಗ್ ರೈತನ ಸಾಧನೆ ಬಗ್ಗೆ ಮಾತಾಡೋಣ ಬನ್ನಿ. ಕೇವಲ ಮಳೆ ಆಧಾರಿತ ಬೆಳೆ ಬೆಳೆದು ಲಕ್ಷಾಂತರ ಆದಾಯ ಪಡೆದ ರೈತನ ಕಥೆ.
ಬೀದರ್ ತಾಲ್ಲೂಕಿನ
ಮಲ್ಕಾಪುರ ಗ್ರಾಮದ ಸಿವಿಲ್ ಎಂಜಿನಿಯರಿಂಗ್ ಪದವೀಧರ ರವಿ ರೊಡ್ಡಾ ಅವರು ಎಂಜಿನಿಯರಿಂಗ್ ವೃತ್ತಿಯನ್ನು ತೊರೆದು ಕರಿಬೇವು ಕೃಷಿ ಮಾಡಿ, ಯಶಸ್ವಿಯಾಗಿದ್ದಾರೆ.
ರವಿ ಅವರು ಸುಲ್ತಾನಪುರದಲ್ಲಿ ಪಾಳು ಬಿದ್ದಿದ್ದ ತಮ್ಮ ಒಂದೂವರೆ ಎಕರೆ ಜಮೀನನ್ನು ಕೃಷಿ ಯೋಗ್ಯವಾಗಿಸಿ, 2023ರ ಆಗಸ್ಟ್ನಲ್ಲಿ 8,400 ಕರಿಬೇವು ಸಸಿಗಳನ್ನು ನಾಟಿ ಮಾಡಿದ್ದಾರೆ. ಹನಿ ನೀರಾವರಿ ಪದ್ಧತಿ ಅಳವಡಿಸಿ, ಕೊಳವೆಬಾವಿಯಿಂದ ನೀರುಣಿಸಿದ್ದಾರೆ. ಒಂಬತ್ತು ತಿಂಗಳಲ್ಲಿ ಬಂಪರ್ ಬೆಳೆ ಬಂದಿದೆ.
ಸ್ಥಳೀಯ ತಳಿಯ ಕರಿಬೇವು ಸಸಿಗಳನ್ನು ತೋಟಗಾರಿಕೆ ಇಲಾಖೆಯಿಂದ ಖರೀದಿಸಿದ್ದಾರೆ. ಸಸಿ ನಾಟಿ ಮಾಡಿದ್ದು ಆರು ವರ್ಷಗಳ ಹಿಂದೆ. ಸಸಿ ಹಾಕಿದ ಮೊದಲ ಎರಡು ವರ್ಷಗಳವರೆಗೆ ಕೊಟ್ಟಿಗೆ ಗೊಬ್ಬರ ನೀಡಿದ್ದಾರೆ.
ಗಿಡಗಳು 3 ವರ್ಷಗಳ ಕಾಲ ಬೆಳೆದ ಮೇಲೆ ಕರಿಬೇವು ಕೊಯ್ಲು ಆರಂಭ. ಆರಂಭದಲ್ಲಿ ಮದುವೆ ಮತ್ತಿತರ ಸಮಾರಂಭ ಹಾಗೂ ಸ್ಥಳೀಯ ವ್ಯಾಪಾರಸ್ಥರಿಗೆ ಬೇಡಿಕೆಗೆ ಅನುಗುಣವಾಗಿ ಕರಿಬೇವು ಕೊಟ್ಟಿದ್ದಾರೆ.
ಗಿಡಗಳು ಐದು ವರ್ಷಗಳಲ್ಲಿ ಸಾಕಷ್ಟು ದೊಡ್ಡದಾಗಿ ಬೆಳೆದ ಬಳಿಕ ಹೆಚ್ಚಿನ ಪ್ರಮಾಣದಲ್ಲಿ ಕೊಯ್ಲು ಆರಂಭಿಸಿದರು. ಈಗ ಪ್ರತಿ ತಿಂಗಳು ಸರಾಸರಿ 3 ಸಾವಿರ ರೂ. ಆದಾಯ ಅವರಿಗೆ ಸಿಗುತ್ತಿದೆ. ಕರಿಬೇವಿನ ಬೆಳೆಗೆ ರಸಾಯನಿಕ ಗೊಬ್ಬರ ನೀಡುವುದಿಲ್ಲ.
2024ರ ಮೇ ನಲ್ಲಿ ಬೆಳೆಯ ಮೊದಲ ಕಟಾವು ಆಗಿದ್ದು, ಅಂದಿನಿಂದ ನಿತ್ಯ ಬೀದರ್ ಮಾರುಕಟ್ಟೆಯಲ್ಲಿ ಕರಿಬೇವು ಮಾರಾಟ ಮಾಡುತ್ತಿದ್ದಾರೆ. ಇದರಿಂದ ತಿಂಗಳಿಗೆ ₹90 ಸಾವಿರದಿಂದ ₹1 ಲಕ್ಷದವರೆಗೆ ಆದಾಯ ಗಳಿಸುತ್ತಿದ್ದಾರೆ.
ಗಿಡೆಗಳಿಗೆ ಎರಡು ವರ್ಷ ತುಂಬಿದರೆ ಆಗ ಒಂದು ಕಟಾವಿಗೆ ಪ್ರತಿ ಗಿಡಕ್ಕೆ ಈಗಿನ ಬೆಲೆಗೆ 100 ರೂ. ಸಿಗಬಹುದು. ಆಗ 500ಗಿಡಗಳಿಗೆ ಒಂದು ಬೆಳೆಗೆೆ ಸುಮಾರು 50 ಸಾವಿರ ರೂ. ಸಿಗಬಹುದು.
ಸಹಾಯಕ ತೋಟಗಾರಿಕೆ ಅಧಿಕಾರಿ ಕಾಶಿನಾಥ ಸ್ವಾಮಿ ಮಾರ್ಗದರ್ಶನದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ನೆರವಿನೊಂದಿಗೆ ಕರಿಬೇವು ಕೃಷಿ ಮಾಡಿದ್ದೇನೆ ಎಂದು ರವಿ ರೊಡ್ಡಾ ತಿಳಿಸಿದರು.
ಕರಿಬೇವು ಸಸಿಗಳನ್ನು ತೋಟಗಾರಿಕೆ ಇಲಾಖೆಯಿಂದ ಖರೀದಿಸಿದ್ದಾರೆ. ಮೊದಲು ಜಮೀನಿಗೆ ಕೊಟ್ಟಿಗೆ ಗೊಬ್ಬರ ಹಾಗೂ ಕುರಿಹಿಕ್ಕಿ ಗೊಬ್ಬರ ಹಾಕಿ ಜಮೀನನ್ನು ಹದಗೊಳಿಸಲಾಗಿದೆ.
ಸಸಿ ನೆಡಲು ಗುಂಡಿ ತೆಗೆದು ನಾಟಿ ಮಾಡಿದ್ದಾರೆ. ತನ್ನ ಜಮೀನಿನಲ್ಲಿ ಇರುವ ಬೋರ್ವೆಲ್ ನೀರಿನಿಂದ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. 1 ವರ್ಷದ ನಂತರ ಕರಿಬೇವು ಕೊಯ್ಲಿಗೆ ಬರಲಿದ್ದು ಉತ್ತಮ ಇಳುವರಿ ಪಡೆದಿದ್ದಾರೆ.
ಬೀಜ, ಗೊಬ್ಬರ, ಕೀಟನಾಶಕ, ಹನಿ ನೀರಾವರಿ ಪದ್ಧತಿ ಅಳವಡಿಕೆ, ಆಳುಗಳ ಕೂಲಿ ಸೇರಿ ಈವರೆಗೆ ₹ 2 ಲಕ್ಷ ಖರ್ಚು ಮಾಡಿದ್ದೇನೆ. 11 ತಿಂಗಳ ಅವಧಿಯಲ್ಲಿ ಎಲ್ಲ ಖರ್ಚು ಹೊರತುಪಡಿಸಿ, ಹೆಚ್ಚುವರಿ ₹ 6 ಲಕ್ಷ ಆದಾಯ ಬಂದಿದೆ ಎಂದು ಹೇಳುತ್ತಾರೆ.
ಕರಿಬೇವಿನ ಬೀಜ ತಂದು, ಸಸಿಯಾಗಿಸಿ, ನಾಟಿ ಮಾಡಿದ್ದೇನೆ. 28 ಸಾಲುಗಳಲ್ಲಿ 8,400 ಗಿಡಗಳು ಇವೆ. ಗಿಡಗಳ ಅಂತರ ಸಾಲಿನಿಂದ ಸಾಲಿಗೆ 6 ಅಡಿ ಹಾಗೂ ಗಿಡದಿಂದ ಗಿಡಕ್ಕೆ ಒಂದೂವರೆ ಅಡಿ ಅಂತರದಲ್ಲಿ ಗಿಡಗಳನ್ನು ನೆಡಲಾಗಿದೆ.
ಸದ್ಯ ಮಾರುಕಟ್ಟೆಯಲ್ಲಿ ಕರಿಬೇವು ಬೆಲೆ ಕೆ.ಜಿ.ಗೆ * 60 ಇದೆ. ನಿತ್ಯ ಸರಾಸರಿ 50 ಕೆ.ಜಿ. ಇಳುವರಿ ಬರುತ್ತಿದ್ದು, * 3 ಸಾವಿರ ಗಳಿಕೆ ಆಗುತ್ತಿದೆ ಎಂದು ಹೇಳುತ್ತಾರೆ.
ಕರಿಬೇವು ಉಪಯೋಗಗಳು –
* ಕಡಿಮೆ ಮಾಡುತ್ತದೆ ಕೊಲೆಸ್ಟ್ರಾಲ್ ಮಟ್ಟ.
* ಕರಿಬೇವು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ.
* ಯಕೃತ್ತಿಗೆ ಕರಿಬೇವು.
* ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ.
* ಬ್ಯಾಕ್ಟೀರಿಯಾವನ್ನು ನಿವಾರಿಸುತ್ತದೆ..
* ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
* ಅಡ್ಡ ಪರಿಣಾಮಗಳನ್ನು ನಿಯಂತ್ರಿಸುತ್ತದೆ.
* ಕರಿಬೇವಿನ ಎಲೆಗಳಲ್ಲಿ ಮಧುಮೇಹ ವಿರೋಧಿ ಗುಣಗಳು.
* ಗಾಯಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.
ನಿಮ್ಮ ಆಹಾರದಲ್ಲಿ ಕರಿಬೇವಿನ ಎಲೆಗಳನ್ನು ಸೇರಿಸುವುದು ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ, ಹೆಚ್ಚಿನ ಫೈಬರ್ ಅಂಶ ಮತ್ತು ಉತ್ತಮ ಜೀರ್ಣಕ್ರಿಯೆಯನ್ನು ಉತ್ತೇಜಿಸುವ ಸಾಮರ್ಥ್ಯಕ್ಕೆ ಧನ್ಯವಾದಗಳು. ಹೆಚ್ಚುವರಿಯಾಗಿ, ಕರಿಬೇವಿನ ಎಲೆಗಳು ದೇಹವು ವಿಷವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ, ಕೊಬ್ಬಿನ ಶೇಖರಣೆಯನ್ನು ತಡೆಯುತ್ತದೆ ಮತ್ತು ಆರೋಗ್ಯಕರ ಚಯಾಪಚಯವನ್ನು ಕಾಪಾಡಿಕೊಳ್ಳುತ್ತದೆ.