ನನ್ನ ರೈತರೇ ಇವತ್ತು ನಾವು ರೇಷ್ಮೆ ಮಾರುಕಟ್ಟೆ ಬಗ್ಗೆ ತಿಳಿಯೋಣ ಬನ್ನಿ. ರೇಷ್ಮೆ ಸೀರೆ ಮತ್ತು ಇತರ ರೇಷ್ಮೆ ವಸ್ತುಗಳ (Silk Production) ಉತ್ಪಾದನೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ಕರ್ನಾಟಕ (Karnataka) ಇದೀಗ ಈಶಾನ್ಯ ರಾಜ್ಯಗಳು ಹಾಗೂ ಆಗ್ನೇಯ ಏಷ್ಯಾದ ದೇಶಗಳಿಗೆ ರೇಷ್ಮೆ ಗೂಡುಗಳನ್ನು ರಫ್ತು ಮಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸಲಿದೆ.
ಪ್ರವಾಸೋದ್ಯಮ ಪ್ರಾಥಮಿಕ ಆದಾಯದ ಮೂಲವಾಗಿರುವ ಸಿಂಗಾಪುರ ಮತ್ತು ಇತರ ಆಗ್ನೇಯ ಏಷ್ಯಾದ ದೇಶಗಳಿಂದ ರೇಷ್ಮೆ ಗೂಡುಗಳಿಗೆ ಬೇಡಿಕೆ ಹೆಚ್ಚುತ್ತಿರುವುದನ್ನು ಭಾರತ ಕಂಡುಕೊಂಡಿದ್ದು, ರಫ್ತು ಹೆಚ್ಚಳಕ್ಕೆ ಚಿಂತನೆ ನಡೆಸಿದೆ. ಈ ದೇಶಗಳಿಗೆ ರಫ್ತಿನಲ್ಲಿ ಕರ್ನಾಟಕ ಮುಂಚೂಣಿಯಲ್ಲಿರಲಿದೆ ಎಂದು ವರದಿಯಾಗಿದೆ.
‘ರೇಷ್ಮೆ ಗೂಡುಗಳನ್ನು ಉತ್ಪಾದಿಸುವ ಅತಿದೊಡ್ಡ ದೇಶಗಳಲ್ಲಿ ಭಾರತ ಒಂದಾಗಿದೆ. ರಾಜ್ಯಗಳ ವಿಚಾರಕ್ಕೆ ಬಂದರೆ, ಕರ್ನಾಟಕವು ಮುಂಚೂಣಿಯಲ್ಲಿದೆ. ಇಲ್ಲಿಂದ ರೇಷ್ಮೆ ಗೂಡುಗಳಿಗೆ ಬೇಡಿಕೆ ಹೆಚ್ಚಿರುವ ಇತರ ದೇಶಗಳಿಗೆ ರಫ್ತು ಮಾಡಬಹದು.
ರೇಷ್ಮೆಯನ್ನು ಹಿಡಿದ ನಂತರ ಅವುಗಳನ್ನು ಜೀವಂತವಾಗಿ ರಫ್ತು ಮಾಡುವ ನಿಟ್ಟಿನಲ್ಲಿ ನಾವು ಕ್ರಮ ಕೈಗೊಳ್ಳುತ್ತಿದ್ದೇವೆ’ ಎಂದು ಎಂದು ಸೆಂಟ್ರಲ್ ಸಿಲ್ಕ್ ಬೋರ್ಡ್ ಕಾರ್ಯದರ್ಶಿ ಮತ್ತು ಸಿಇಒ ಶಿವಕುಮಾರ್ ಪೆರಿಯಸಾಮಿ ಹೇಳಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಸತ್ತ ರೇಷ್ಮೆ ಹುಳವನ್ನು ಒಣಗಿಸಿ, ಪುಡಿ ಮಾಡಿ ಈಗಾಗಲೇ ರಫ್ತು ಮಾಡಲಾಗುತ್ತದೆ. ಇದನ್ನು ಪ್ರೋಟೀನ್ಗೆ ಪೂರಕವಾಗಿ ನಾಯಿಗಳಿಗೆ ನೀಡಲಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.
ರೇಷ್ಮೆ ಹುಳಕ್ಕೆ ಈಶಾನ್ಯ ರಾಜ್ಯಗಳಲ್ಲಿ ಭಾರಿ ಬೇಡಿಕೆ
ರೇಷ್ಮೆ ಹುಳವನ್ನು ಜೀವಂತವಾಗಿಡಲು ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಜೀವಂತ ರೇಷ್ಮೆ ಹುಳದಿಂದ ರೇಷ್ಮೆ ಹೊರತೆಗೆಯುವ ವಿಧಾನಗಳ ಕುರಿತು ದಾಖಲೆಗಳನ್ನು ಸಿದ್ಧಪಡಿಸಲಾಗುತ್ತಿದೆ.
ಈಶಾನ್ಯ ರಾಜ್ಯಗಳಲ್ಲಿ, ಎರಿ ರೇಷ್ಮೆ ಹುಳವನ್ನು ಸೇವಿಸಲಾಗುತ್ತದೆ ಮತ್ತು ನಾಗಾಲ್ಯಾಂಡ್ನ ದಿಮಾಪುರದಂತಹ ನಗರಗಳಲ್ಲಿ ಇದನ್ನು ಕೆಜಿಗೆ 700 ರೂ.ನಿಂದ 1,200 ರೂ. ವರೆಗೆ ಮಾರಾಟ ಮಾಡಲಾಗುತ್ತದೆ ಎಂದು ವರದಿ ತಿಳಿಸಿದೆ.
ಇತರ ದೇಶಗಳಲ್ಲಿ ರೇಷ್ಮೆ ಸೇವನೆ ಕಾನೂನುಬದ್ಧವಾಗಿದೆ ಮತ್ತು ಈಶಾನ್ಯ ಭಾರತದಲ್ಲಿ ಇದು ಸಾಂಪ್ರದಾಯಿಕ ಆಹಾರ ಪದ್ಧತಿಯಾಗಿದೆ. ಮಲ್ಬೆರಿ ರೇಷ್ಮೆ ಗೂಡುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇವುಗಳ ಉತ್ಪಾದನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ವರದಿ ಉಲ್ಲೇಖಿಸಿದೆ.
ರೇಷ್ಮೆ ಪ್ರೋಟೀನ್ ಭರಿತ ಸೌಂದರ್ಯವರ್ಧಕಗಳಿಗೆ ಥೈಲ್ಯಾಂಡ್ನಂತಹ ದೇಶಗಳಲ್ಲಿ ಭಾರಿ ಬೇಡಿಕೆಯಿದೆ. ಔಷಧಗಳು ಸೇರಿದಂತೆ ರೇಷ್ಮೆ ಉಪಉತ್ಪನ್ನ ವಲಯವನ್ನು ಬಲಪಡಿಸುವ ಕೆಲಸ ನಡೆಯುತ್ತಿದೆ.
ಇಲ್ಲಿ, ಸಂಶೋಧಕರು ಖಾಸಗಿ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಪೆರಿಯಸಾಮಿ ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.
ರೇಷ್ಮೆ ಗೂಡುಗಳಲ್ಲಿ ಅಮೈನೋ ಆಮ್ಲಗಳು, ಆರೋಗ್ಯಕರ ಕೊಬ್ಬುಗಳು, ಒಮೆಗಾ-3, ಖನಿಜಗಳು ಮತ್ತು ವಿಟಮಿನ್ಗಳು ಸಮೃದ್ಧವಾಗಿರುವುದನ್ನು ಅಂತರರಾಷ್ಟ್ರೀಯ ಅಧ್ಯಯನಗಳು ಪತ್ತೆಹಚ್ಚಿವೆ.
ಚೀನಾ, ವಿಯೆಟ್ನಾಂ ಮತ್ತು ಜಪಾನ್ನಲ್ಲಿ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಲಾಗುತ್ತದೆ. ಚೀನಾ ಕೂಡ ದೊಡ್ಡ ರೇಷ್ಮೆ ಉತ್ಪಾದಕ ರಾಷ್ಟ್ರವಾಗಿದ್ದು, ಅದಕ್ಕೆ ತೀವ್ರ ಸ್ಪರ್ಧೆ ನೀಡುವ ನಿಟ್ಟಿನಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್ ಕೆಲಸ ಮಾಡುತ್ತಿದೆ.
ಕಡಿಮೆ ವೆಚ್ಚದ ಹುಳು ಸಾಕಾಣಿಕೆ ಶೆಡ್ ನಿರ್ಮಾಣಕ್ಕೆ ಸಹಾಯಧನ.
% ರಿಯಾಯಿತಿ –
ಸಾಮಾನ್ಯ ವರ್ಗದವರಿಗೆ ಘಟಕದರದ ಶೇ.75 ರಿಯಾಯಿತಿ ಪ.ಜಾ/ಪ.ಪಂಗಡದವರಿಗೆ ಘಟಕದರದ ಶೇ.90 ರಿಯಾಯಿತಿ.
ರೇಷ್ಮೆ ಬೆಳೆಗಾರರಿಗೆ ಇದರ ಉಪಯೋಗ ಸಿಗುತ್ತದೆ.
ರೇಷ್ಮೆ ಮನೆ ನಿರ್ಮಾಣಕ್ಕೆ ಇರುವ ಅರ್ಹತೆಗಳು/ಮಾನದಂಡಗಳು –
* ಹುಳು ಸಾಕಾಣಿಕೆ ಮನೆಯು ರೇಷ್ಮೆ ಹುಳು ಸಾಕಾಣಿಕೆ ಮಾಡಲು ಸಾಧ್ಯವಾಗುವಂತೆ ಸಾಕಷ್ಟು ಗಾಳಿಯಾಡಲು ಕಿಟಕಿ/ಗವಾಕ್ಷಿಗಳು ಇರಬೇಕು.
* ಹುಳು ಸಾಕಾಣಿಕೆ ಮನೆಯು, ರೋಗದ ಸೋಂಕು ತಡೆಯಲು, ಪ್ರತ್ಯೇಕವಾಗಿರಬೇಕು ಹಾಗೂ ಇದಕ್ಕೆ ಹೊಂದಿಕೊಂಡಂತೆ ವಾಸದ ಮನೆ ಇರಬಾರದು
* ಹುಳು ಸಾಕಾಣಿಕೆ ಮನೆಯ ನೆಲ ಹಾಗೂ ಗೋಡೆಗಳು ಸಿಮೆಂಟ್ನಿಂದ ಗಿಲಾವು ಮಾಡಿಸಿದ್ದು, ಹುಳು ಸಾಕಾಣಿಕೆ ಮನೆಗಳಲ್ಲಿ ಉಷ್ಣಾಂಶ ಮತ್ತು ಶೈತ್ಯಾಂಶ ನಿರ್ವಹಿಸಲು ಸಾಧ್ಯವಾಗುವಂತೆ ಹಾಗೂ ಪರಿಣಾಮಕಾರಿ ಸೋಂಕುನಿವಾರಣೆ ಮಾಡಲು ಸಾಧ್ಯವಾಗುವಂತೆ ಇರಬೇಕು.
* ನಿಗದಿತ ನಕ್ಷೆಯಂತೆ ರೇಷ್ಮೆ ಹುಳು ಸಾಕಾಣಿಕೆ ಮನೆ ನಿರ್ಮಾಣ ಮಾಡಿರಬೇಕು.(225, 600 ಮತ್ತು 1000 ಚ.ಅಡಿಗಳಿಗೆ ಮಾತ್ರ). ಈ ನಿಯಮ ಕಡಿಮೆ ವೆಚ್ಚದ ಶೆಡ್ಗೆ ಅನ್ವಯಿಸುವುದಿಲ್ಲ
* ಹುಳು ಸಾಕಾಣಿಕೆ ಮಾಡುವ ಬಗ್ಗೆ ಚಾಲ್ತಿಯಲ್ಲಿರುವ ಪಾಸ್ ಪುಸ್ತಕ ಹೊಂದಿರಬೇಕು.
* ರೇಷ್ಮೆ ಹುಳು ಸಾಕಾಣಿಕೆ ಮನೆಗಳಿಗೆ ಸಹಾಯಧನ ನೀಡುವ ಮುನ್ನಾ ಸರ್ಕಾರದ ಇತರೆ ಯೋಜನೆಗಳಡಿ ಸದರಿ ಮನೆಗೆ ಆರ್ಥಿಕ ಸೌಲಭ್ಯ ಪಡೆದಿರಬಾರದು.
* ರೇಷ್ಮೆ ಬೆಳೆಗಾರರು ತಮ್ಮ ಹೆಸರಿನಲ್ಲಿ ಮೇಲೆ ವಿವರಿಸಿರುವ ಕೋಷ್ಟಕ ರೀತ್ಯಾ ಕನಿಷ್ಠ ವಿಸ್ತೀರ್ಣದಷ್ಟು ಹಿಪ್ಪುನೇರಳೆ ತೋಟ ಹೊಂದಿರಬೇಕು ಹಾಗೂ ಅಂತಹ ದಾಖಲಾತಿ ಇರುವ ಪಹಣಿಯನ್ನು ಒದಗಿಸಬೇಕು.
* ರೇಷ್ಮೆ ಬೆಳೆಗಾರರು ದ್ವಿತಳಿ/ಸುಧಾರಿತ ಮಿಶ್ರ ತಳಿ ರೇಷ್ಮೆ ಬೆಳೆಗಾರರಾಗಿದ್ದು, ವರ್ಗಕ್ಕೆ ಕನಿಷ್ಠ ಎರಡು ದ್ವಿತಳಿ ಹುಳು ಸಾಕಾಣಿಕೆ ಮಾಡಬೇಕು.(ಮೈಸೂರು ಬಿತ್ತನೆ ಪ್ರದೇಶದ ರೇಷ್ಮೆ ಬೆಳೆಗಾರರಿಗೆ ದ್ವಿತಳಿ ಬೆಳೆ ಮಾಡಬೇಕೆಂಬ ನಿಯಮ ಇರುವುದಿಲ್ಲ)
* ರೇಷ್ಮೆಬೆಳೆಗಾರರು ರೇಷ್ಮೆಹುಳು ಸಾಕಾಣಿಕಾ ಪಾಸ್ ಪುಸ್ತಕ/ರೇಷ್ಮೆಕಾರ್ಡ್ ಹೊಂದಿರಬೇಕು.
ಸಲ್ಲಿಸಬೇಕಾದ ದಾಖಲೆಗಳು –
* ರೇಷ್ಮೆ ಹುಳು ಸಾಕಾಣಿಕೆ ಮನೆ ನಿರ್ಮಾಣಕ್ಕೆ ಸಕ್ಷಮ ಪ್ರಾಧಿಕಾರದಿಂದ ಪಡೆದ ಪ್ರಮಾಣಪತ್ರದ ದೃಢೀಕೃತ ಪ್ರತಿ.
* ಹಿಪ್ಪುನೇರಳೆ ತೋಟದ ಸರ್ವೆ ನಂಬರು(ಗಳು)ಳ್ಳ ಚಾಲ್ತಿ ಪಹಣಿ.
* ರೇಷ್ಮೆ ಹುಳು ಸಾಕಾಣಿಕೆ ಮನೆನಿರ್ಮಾಣಕ್ಕೆ ಸಕ್ಷಮ ಪ್ರಾಧಿಕಾರದ ಅನುಮೋದನೆ ಪತ್ರದ ಮೂಲ ಪ್ರತಿ.
* ರೇಷ್ಮೆ ಹುಳು ಸಾಕಾಣಿಕೆ ಮನೆ ಕಟ್ಟಲು ಮಂಜೂರಾದ ನಕ್ಷೆಯ ಮೂಲ ಪ್ರತಿ.
* ಸ್ಥಳ ಪರಿಶೀಲನಾ ವರದಿ – ರೇಷ್ಮೆ ಹುಳು ಸಾಕಾಣಿಕೆ ಮನೆ ನಿರ್ಮಾಣದ ಮುನ್ನ ಮತ್ತು ನಂತರದ ವರದಿ.
* ರೇಷ್ಮೆ ಹುಳು ಸಾಕಾಣಿಕೆ ಮನೆಯ ಎಸ್ಟಿಮೇಟ್ (ವೆಚ್ಚದ ಅಂದಾಜು ಪಟ್ಟಿ)
* ನೋಂದಾಯಿತ ರೇಷ್ಮೆ ಬೆಳೆಗಾರರಾಗಿರುವ ವಿವರ.
* ಪ.ಜಾ./ಪ.ಪಂ.ದವರಿಗೆ ಜಾತಿ ಪ್ರಮಾಣ ಪತ್ರ
* 50 ರೂಪಾಯಿ ಬಾಂಡ್
ಯಾರಿಗೆ ಸಂಪರ್ಕ ಮಾಡಬೇಕು?
ಸ್ಥಳೀಯ ರೇಷ್ಮೆ ವಿಸ್ತರಣಾಧಿಕಾರಿ/ ರೇಷ್ಮೆ ಸಹಾಯಕ ನಿರ್ದೇಶಕ ಸಹಾಯಕ ನಿರ್ದೇಶಕರು/ಸಂಬಂಧಿಸಿದ ಜಿಲ್ಲೆಯ ರೇಷ್ಮೆ ಉಪನಿರ್ದೇಶಕರನ್ನು ಸಂಪರ್ಕಿಸುವುದು.
ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತರು ಹಾಗೂ ರೇಷ್ಮೆ ನಿರ್ದೇಶಕರು, ರೇಷ್ಮೆ ನಿರ್ದೇಶನಾಲಯ, 5ನೇ ಮಹಡಿ, ಬಹುಮಹಡಿಗಳ ಕಟ್ಟಡ, ಡಾ.ಬಿ.ಆರ್ ಅಂಬೇಡ್ಕರ್ ವೀಧಿ,
ಬೆಂಗಳೂರು-560001
: 080-22252611
ಹಾಗೂ ವಿಭಾಗೀಯ ರೇಷ್ಮೆ ಜಂಟಿ ನಿರ್ದೇಶಕರು
karseri@yahoo.co.in
www.karnataka.gov.in/sericulture
080-22246786, 080-22246786, +91-9900881100