ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಹೊಸ ಯೋಜನೆ! ಬಂಪರ್ ಕೊಡುಗೆ

ನಿಮ್ಮ ತಾಯಿ, ಸಹೋದರಿ, ಹೆಂಡತಿ ಹೆಸರಲ್ಲಿ ಠೇವಣಿ ಇಡಬಹುದಾದ, ಉತ್ತಮ ಬಡ್ಡಿ ಕೊಡಬಹುದಾದ ಕೇಂದ್ರ ಸರಕಾರದ ಯೋಜನೆ ಯೊಂದಿದೆ. ಅದರ ಬಗ್ಗೆ ನಿಮಗೆ ಗೊತ್ತಾ? ಕೇಂದ್ರ ಸರಕಾರ ಮಹಿಳೆಯರಿಗಾಗಿ ಜಾರಿಗೊಳಿಸಿರುವ ಯೋಜನೆಗಳಲ್ಲಿ ‘ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ(ಎಂಎಸ್‌ಎಸ್‌ಸಿ)’ ಕೂಡ ಒಂದಾಗಿದೆ. ಇದು 2023ರಲ್ಲೇ ಆರಂಭವಾಯಿತು.

ಯಾರು ಈ ಯೋಜನೆಗೆ ಅರ್ಹರು?

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವನ್ನು ನಿಮ್ಮ ತಾಯಿ, ಸಹೋದರಿ, ಪತ್ನಿ ಅಥವಾ ಬೇರೆಯವರ ಹೆಸರಿನಲ್ಲಿ ತೆಗೆದುಕೊಳ್ಳ ಬಹುದು. ಅಪ್ರಾಪ್ತ ವಯಸ್ಕ ಮಗಳ ಪರವಾಗಿಯೂ ಈ ಖಾತೆಯನ್ನು ತೆರೆಯಬಹುದು,

ಭಾರತದ ಪ್ರತಿಯೊಬ್ಬ ಹುಡುಗಿ ಮತ್ತು ಮಹಿಳೆಗೆ ಆರ್ಥಿಕ ಭದ್ರತೆಯನ್ನು ಒದಗಿಸಲು ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯು ‘ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ” ಎಂಬ ಯೋಜನೆಯನ್ನು ಪ್ರಾರಂಭಿಸಿದೆ.

ಆರ್ಥಿಕ ವ್ಯವಹಾರಗಳ ಇಲಾಖೆ, ಹಣಕಾಸು ಸಚಿವಾಲಯ, ಒಂದು ಮೂಲಕ ಗೆಜೆಟ್ ಅಧಿಸೂಚನೆಜೂನ್ 27, 2023 ರಂದು ಹೊರಡಿಸಲಾದ ಆದೇಶವು, ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಅರ್ಹ ಖಾಸಗಿ ವಲಯದ ಬ್ಯಾಂಕುಗಳು ಈ ಯೋಜನೆಯನ್ನು ಕಾರ್ಯಗತಗೊಳಿಸಲು ಮತ್ತು ಕಾರ್ಯಗತಗೊಳಿಸಲು ಅನುಮತಿ ನೀಡಿದೆ.

ಹುಡುಗಿಯರು/ಮಹಿಳೆಯರಿಗೆ ಈ ಯೋಜನೆಯನ್ನು ವರ್ಧಿತವಾಗಿ ಬಳಸಿಕೊಳ್ಳುವ ಗುರಿಯನ್ನು ಇದು ಹೊಂದಿದೆ. ಇದರೊಂದಿಗೆ, ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ’ ಯೋಜನೆಯು ಈಗ ಅಂಚೆ ಕಚೇರಿಗಳು ಮತ್ತು ಅರ್ಹ ಪರಿಶಿಷ್ಟ ಬ್ಯಾಂಕ್‌ಗಳಲ್ಲಿ ಚಂದಾದಾರಿಕೆಗೆ ಲಭ್ಯವಿರುತ್ತದೆ.

ಈ ಯೋಜನೆಯು ಏಪ್ರಿಲ್ 1, 2023 ರಿಂದ ಅಂಚೆ ಇಲಾಖೆಯ ಮೂಲಕ ಜಾರಿಯಲ್ಲಿದೆ ಮತ್ತು ಮಾರ್ಚ್ 31, 2025 ರವರೆಗೆ ಎರಡು ವರ್ಷಗಳ ಅವಧಿಗೆ ಮಾನ್ಯವಾಗಿರುತ್ತದೆ.

ಯೋಜನೆಯ ಪ್ರಮುಖ ಲಕ್ಷಣಗಳು:

* ಎಲ್ಲಾ ಹುಡುಗಿಯರು ಮತ್ತು ಮಹಿಳೆಯರಿಗೆ ಆಕರ್ಷಕ ಮತ್ತು ಸುರಕ್ಷಿತ ಹೂಡಿಕೆ ಆಯ್ಕೆಗಳನ್ನು ಒದಗಿಸುತ್ತದೆ.
* ಈ ಯೋಜನೆಯಡಿಯಲ್ಲಿ ಮಾರ್ಚ್ 31, 2025 ರಂದು ಅಥವಾ ಅದಕ್ಕೂ ಮೊದಲು ಎರಡು ವರ್ಷಗಳ ಅವಧಿಗೆ ಖಾತೆಯನ್ನು ತೆರೆಯಬಹುದು.
* MSSC ಅಡಿಯಲ್ಲಿ ಮಾಡಿದ ಠೇವಣಿಗೆ ವಾರ್ಷಿಕ 7.5% ದರದಲ್ಲಿ ಬಡ್ಡಿ ದೊರೆಯುತ್ತದೆ, ಇದನ್ನು ತ್ರೈಮಾಸಿಕಕ್ಕೆ ಚಕ್ರಬಡ್ಡಿ ಮಾಡಲಾಗುತ್ತದೆ.
* ಕನಿಷ್ಠ ₹1,000/- ಮತ್ತು 100 ರ ಗುಣಕಗಳಲ್ಲಿ ಯಾವುದೇ ಮೊತ್ತವನ್ನು ಗರಿಷ್ಠ ₹2,00,000/- ಮಿತಿಯೊಳಗೆ ಠೇವಣಿ ಮಾಡಬಹುದು
* ಈ ಯೋಜನೆಯಡಿಯಲ್ಲಿ ಹೂಡಿಕೆಯ ಮುಕ್ತಾಯವು ಖಾತೆಯನ್ನು ತೆರೆದ ದಿನಾಂಕದಿಂದ ಎರಡು ವರ್ಷಗಳಾಗಿರುತ್ತದೆ.
* ‘ಇದು ಹೂಡಿಕೆಯಲ್ಲಿ ಮಾತ್ರವಲ್ಲದೆ ಯೋಜನೆಯ ಅವಧಿಯಲ್ಲಿ ಭಾಗಶಃ ಹಿಂಪಡೆಯುವಿಕೆಯಲ್ಲೂ ನಮ್ಯತೆಯನ್ನು ಕಲ್ಪಿಸುತ್ತದೆ.
* ಖಾತೆದಾರರು ಯೋಜನೆಯ ಖಾತೆಯಲ್ಲಿ ಅರ್ಹವಾದ ಬಾಕಿ ಮೊತ್ತದ ಗರಿಷ್ಠ 40% ವರೆಗೆ ಹಿಂಪಡೆಯಲು ಅರ್ಹರಾಗಿರುತ್ತಾರೆ.

ಎಲ್ಲಿ ಸಿಗುತ್ತದೆ?

ಸರಕಾರಿ ಬ್ಯಾಂಕ್ ಗಳು, ಅಂಚೆ ಕಚೇರಿಗಳು ವಿಶೇಷ: ಶೇ. 7.5 ಬಡ್ಡಿದರ ಮತ್ತು ರಿಟರ್ನ್ಸ್ ಖಾತ್ರಿ ಠೇವಣಿ ಪ್ರಮಾಣ ಕನಿಷ್ಠ 1,000 ರೂ.ನಿಂದ ಗರಿಷ್ಠ 2 ಲಕ್ಷ ರೂ.ವರೆಗೆ ಠೇವಣಿಗೆ ಅವಕಾಶ 2 ವರ್ಷಗಳಲ್ಲಿ ಪಕ್ವವಾಗುತ್ತದೆ. ನೀವು ಬಯಸಿದಲ್ಲಿ ಒಂದು ವರ್ಷದ ನಂತರ ಶೇ.40ರಷ್ಟು ) ಹಿಂಪಡೆಯಬಹುದು. ಹಣವನ್ನು ಬಡ್ಡಿ: ನಿಶ್ಚಿತ ಠೇವಣಿ ಮೊತ್ತ 2 ಲಕ್ಷ ಇಟ್ಟರೆ ನಿಮಗೆ 2 ವರ್ಷಕ್ಕೆ 32,044 ರೂ. ಬಡ್ಡಿ ಸಿಗುತ್ತದೆ. ಒಟ್ಟು ಮೆಚೂರಿಟಿ 2,32,044 . ದೊರೆಯುತ್ತದೆ. ವಾರ್ಷಿಕ ಬಡ್ಡಿ ದರ 7.5 ಪ್ರಕಾರ, 2 ಲಕ್ಷ ರೂ. ಮೊತ್ತಕ್ಕೆ 30 ಸಾವಿರ ರೂ. ಆಗುತ್ತದೆ. 2,044)ರೂ. ಹೆಚ್ಚುವರಿಯಾಗಿ ನೀಡಲಾಗುತ್ತದೆ.

ಅವಧಿಗೂ ಮೊದಲು ಖಾತೆ ರದ್ದು ಸಾಧ್ಯವೇ?

ಪಾಲಿಸಿ ತೆಗೆದುಕೊಂಡ ಮಹಿಳೆ ಸಾವನ್ನಪ್ಪಿದರೆ, ಆಕೆಯ ಹೆಸರಿನ ಖಾತೆಯನ್ನು ಅವಧಿ ಮುಕ್ತಾಯಕ್ಕೂ ಮುನ್ನ ಮುಚ್ಚಬಹುದು. ಇದಲ್ಲದೆ, ಮಹಿಳೆ ಗಂಭೀರ ಸ್ಥಿತಿಯಲ್ಲಿದ್ದರೂ, ಸಂಬಂಧಿತ ದಾಖಲೆಗಳನ್ನು ಸಲ್ಲಿಸುವ ಮೂಲಕ ಖಾತೆಯನ್ನು ಮೊದಲೇ ಮುಚ್ಚಬಹುದು. ಆದರೆ, ಖಾತೆಯನ್ನು ತೆರೆದ 6 ತಿಂಗಳ ನಂತರ ಯಾವುದೇ ಕಾರಣ ನೀಡದೆ ಖಾತೆ ಮುಚ್ಚಿದರೆ, ಬಡ್ಡಿಯ ಮೇಲೆ ಶೇ. 2 ಕಡಿತ ವಿಧಿಸಲಾಗುತ್ತದೆ. ಶೇ.5.5ರಷ್ಟು ಮಾತ್ರ ಬಡ್ಡಿ ಸಿಗುತ್ತದೆ.

ಸ್ವ ಸಹಾಯ ಗುಂಪುಗಳ ಬಗ್ಗೆ ಮಾಹಿತಿ

ಸ್ವ ಸಹಾಯ ಸಂಘದ ಮಹಿಳಾ ಸದಸ್ಯರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳ ಸಾಲ ಮತ್ತು ಸಹಾಯಧನ ನೀಡುವ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸ್ವ ಉದ್ಯೋಗವನ್ನು ಆರಂಭಿಸಿ ಆರ್ಥಿಕವಾಗಿ ಸಬಲರಾಗಬೇಕು ಎಂದು ಎಸ್.ಎಂ.ಸೆಹಗಲ್ ಫೌಂಡೇಶನ್ ಸಂಸ್ಥೆಯ ಸಹಾಯಕ ಕಾರ್ಯಕ್ರಮ ಅಧಿಕಾರಿ ವಿಜಯ್ ಪುಲಿ ಹೇಳಿದರು.

ಬಂಗಾರಪೇಟೆ ತಾಲ್ಲೂಕಿನ ಕಾರಹಳ್ಳಿ ಗ್ರಾಮದಲ್ಲಿ ಎಸ್.ಎಂ.ಸೆಹಗಲ್ ಫೌಂಡೇಶನ್ ಸಂಸ್ಥೆ ಹಾಗೂ ಬಂಗಾರಪೇಟೆ ಕೃಷಿ ಉತ್ಪಾದಕ ಸಂಸ್ಥೆಯ ಸಹಯೋಗದಲ್ಲಿ ಮಹಿಳಾ ರೈತರಿಗೆ ಸಿಗುವ ಹಣಕಾಸು ಸೌಲಭ್ಯಗಳು ಹಾಗೂ ವಿವಿಧ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಂದಿಗೂ ಹಲವು ಮಹಿಳೆಯರು ಸರ್ಕಾರಗಳಿಂದ ಸಿಗುವ ಸೌಲಭ್ಯಗಳ ಬಗೆಗಿನ ಅರಿವಿನ ಕೊರತೆಯಿಂದ ಯೋಜನೆಗಳ ಪ್ರಯೋಜನೆಗಳಿಂದ ವಂಚಿತರಾಗಿದ್ದಾರೆ. ಸ್ವ ಉದ್ಯೋಗ ಪ್ರಾರಂಭಿಸಲು ಆಸಕ್ತಿ ಇರುವ ಮಹಿಳೆಯರು ಸದಾ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಬೇಕು. ಹಾಗೆಯೇ ವಿವಿಧ ಇಲಾಖೆಗಳಲ್ಲಿ ಅರ್ಜಿ ಸಲ್ಲಿಸಿ, ಸೌಲಭ್ಯ ಪಡೆದು, ಸ್ವ ಉದ್ಯೋಗ ಆರಂಭಿಸಿ, ಆರ್ಥಿಕವಾಗಿ ಸದೃಢರಾಗಬೇಕು ಎಂದು ಕಿವಿಮಾತು ಹೇಳಿದರು.

ಸೆಹಗಲ್ ಸಂಸ್ಥೆ ಯೋಜನೆಯ ಸಂಯೋಜಕರಾದ ನವ್ಯ ಮಾತನಾಡಿ, ಮಹಿಳೆಯರು ಸಾಧಿಸಬೇಕೆನ್ನುವ ಛಲ ಹೊಂದಿದ್ದರೆ, ಎಂತಹ ಸಾಧನೆಯನ್ನಾದರೂ ಮಾಡಲು ಖಂಡಿತ ಸಾಧ್ಯವಿದೆ ಎಂದರು.

ವೈಜ್ಞಾನಿಕ ವಿಧಾನಗಳಲ್ಲಿ ಮಹಿಳೆಯರು ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಚಟುವಟಿಕೆಗಳನ್ನು ಕೈಗೊಂಡರೆ ಹೆಚ್ಚಿನ ಲಾಭ ಪಡೆಯಲು ಸಾಧ್ಯ. ಪ್ರತಿನಿತ್ಯವು ದಿನಪತ್ರಿಕೆ ಓದುವ ಹವ್ಯಾಸವನ್ನು ಮಹಿಳೆಯರು ಆರಂಭಿಸಿದರೆ, ಸರ್ಕಾರದ ಪ್ರತಿ ಯೋಜನೆಯ ಲಾಭ ಪಡೆಯಲು ಸಾಧ್ಯ. ಎಸ್.ಎಂ. ಸೆಹಗಲ್ ಫೌಂಡೇಶನ್ ಮಹಿಳೆಯರ ಶ್ರೇಯೋಭಿವೃದ್ದಿಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.

ಆರ್ಥಿಕ ಸಾಕ್ಷರತಾ ಸಲಹೆಗಾರರಾದ ನಾಗೇಂದ್ರ ಕುಮಾರ್ ಮಾತನಾಡಿ, ಸುಕನ್ಯಾ ಸಮೃದ್ದಿ ಯೋಜನೆ, ಮುದ್ರಾ ಯೋಜನೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಹಾಗೂ ಸುರಕ್ಷಾ ಭಿಮಾ ಯೋಜನೆಗಳ ನೊಂದಣಿ ಹಾಗೂ ಅದರಿಂದ ಸಿಗುವ ಲಾಭಗಳ ಬಗ್ಗೆ ವಿವರಿಸಿದರು.

ಸೆಹಗಲ್ ಸಂಸ್ಥೆಯ ವೆಂಕಟಶಿವಾರೆಡ್ಡಿ ಮಾತನಾಡಿ, ಹಣ್ಣು ತರಕಾರಿಗಳನ್ನು ಬೆಳೆಯುವ ವೈಜ್ಞಾನಿಕ ವಿಧಾನ ಹಾಗೂ ಸೋಲಾರ್ ಡ್ರೆöÊಯರ್ ಉಪಯೋಗಿಸಿಕೊಂಡು ಹಣ್ಣು, ತರಕಾರಿಗಳನ್ನು ಸಂಸ್ಕರಣೆ ಮಾಡಿ ಮಾರಾಟ ಮಾಡುವುದರ ಬಗ್ಗೆ ಸಲಹೆ ನೀಡಿದರು.

ಆರ್ಸೆಟಿ ತರಬೇತಿ ಕೇಂದ್ರದ ತರಬೇತುದಾರ ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ ಮಾತನಾಡಿ, ಸ್ವ ಉದ್ಯೋಗ ಆರಂಭಿಸಲು ಬೇಕಾದ ಅರ್ಹತೆ ಹಾಗೂ ಮಾನದಂಡಗಳ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಬಂಗಾರಪೇಟೆ ಕೃಷಿ ರೈತ ಉತ್ಪಾದಕ ಸಂಸ್ಥೆಯ ಸಿ.ಇ.ಒ. ರಾಜೇಶ್ವರಿ, ಕಾರಹಳ್ಳಿ ಗ್ರಾ.ಪಂ ಅಧ್ಯಕ್ಷ ಶ್ರೀನಿವಾಸಪ್ಪ, ಸದಸ್ಯರಾದ ಕೃಷ್ಣಮೂರ್ತಿ, ಸ್ವ ಸಹಾಯ ಸಂಘದ ಭಾಗ್ಯಮ್ಮ ಸೇರಿದಂತೆ ಮತ್ತಿತರರು ಹಾಜರಿದ್ದರು.

ಚಿತ್ರ : ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಕಾರಹಳ್ಳಿ ಗ್ರಾಮದಲ್ಲಿ ಎಸ್.ಎಂ.ಸೆಹಗಲ್ ಫೌಂಡೇಶನ್ ಸಂಸ್ಥೆ ಹಾಗೂ ಬಂಗಾರಪೇಟೆ ಕೃಷಿ ಉತ್ಪಾದಕ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಹಾಯಕ ಕಾರ್ಯಕ್ರಮ ಅಧಿಕಾರಿ ವಿಜಯ್ ಪುಲಿ ಮಾತನಾಡಿದರು.

Spread positive news

Leave a Reply

Your email address will not be published. Required fields are marked *