ಪ್ರೀಯ ರೈತರೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೃಷಿ ಇಲಾಖೆ ಹಾಗೂ ಇತರೆ ಇಲಾಖೆಗಳಿಗೆ ಸಂಬಂಧಿಸಿದ ಕೆಲಸಗಳು ನಡೆದಿವೆ. ಅದೇ ರೀತಿ ಈಗ ರಾಜ್ಯದಲ್ಲಿ ಸರ್ಕಾರವು ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಹಾಗಾಗಿ ಕರ್ನಾಟಕ ರಾಜ್ಯ ಸಹಕಾರ ಕೃಷಿ ಗ್ರಾಮೀಣಾಭಿವೃದ್ಧಿ ಬ್ಯಾಂಕ್ನಲ್ಲಿ (ಕೆಎಸ್ಬಿಎಆರ್ಡಿಬಿ) ದೀರ್ಘಾವಧಿ ಸಾಲದ ಮೊತ್ತವನ್ನು ಸರ್ಕಾರ 10ರಿಂದ 15 ಲಕ್ಷ ರೂ.ಗೆ ಏರಿಕೆ ಮಾಡಿದೆ. ಗರಿಷ್ಠ 10 ಲಕ್ಷ ರೂ.ತನಕ ಒಬ್ಬ ರೈತರಿಗೆ ಸಾಲ ನೀಡಲು ಮಾತ್ರ ಅವಕಾಶವಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ಘೋಷಣೆ ಮಾಡಿದಂತೆ 5 ಲಕ್ಷ ರೂ. ಏರಿಕೆ ಮಾಡಲಾಗಿದೆ.
ಸಾಲದ ಮಿತಿ ಹೆಚ್ಚಳವಾದ ಮೇಲೆ ಬ್ಯಾಂಕ್ಗಳಿಗೆ ಸಾಲ ಪಡೆಯಬಯಸುವವರ ಪ್ರಮಾಣವೂ ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಪ್ರತಿ ವರ್ಷ ಸರ್ಕಾರದ ಗ್ಯಾರಂಟಿ ಮೇಲೆ ನಬಾರ್ಡ್ನಿಂದ ಸಾಲ ಪಡೆದು ತಾಲೂಕು ರಾಜ್ಯದಲ್ಲಿರುವ ಮಟ್ಟದಲ್ಲಿರುವ 181 ಪಿಎಲ್ಡಿ ಬ್ಯಾಂಕ್ಗಳಿಗೆ ಕಡಿಮೆ ಬಡ್ಡಿದರದಲ್ಲಿ ನೀಡಲಿದೆ. ಬೆಳೆಸಾಲ ಹೊರತಾಗಿ, ಭೂಅಭಿವೃದ್ಧಿ, ಟ್ರ್ಯಾಕ್ಟರ್ ಸೇರಿ ಕೃಷಿ ಯಂತ್ರೋಪಕರಣಗಳಿಗೆ
ರೈತರಿಗೆ 1,600 ಏರಿಕೆಯಾಗಿರುವುದು ವಿಶೇಷ. ಕೋಟಿ ಸಾಲ ನೀಡಿದ ಕರ್ನಾಟಕ ರಾಜ್ಯ ಸಹಕಾರ ಕೃಷಿ ಕೆಎಸ್ಸಿಎಆರ್ಡಿಬಿ ಸಾಲವನ್ನು ಪಿಎಲ್ಡಿ ಬ್ಯಾಂಕ್ ನೀಡಲಿದೆ. 1,600 ಕೋಟಿ ರೂ. ಗುರಿ: ಪ್ರತಿವರ್ಷ ರೈತರಿಗೆ 1,500 ಕೋಟಿ ರೂ. ಮಾತ್ರ ಸಾಲ ನೀಡಲಾಗುತ್ತಿತ್ತು. ಈ ವರ್ಷ 100 ಕೋಟಿ ರೂ. ಹೆಚ್ಚುವರಿಯಾಗಿ ಗ್ಯಾರಂಟಿ ನೀಡುವಂತೆ ಬ್ಯಾಂಕ್ ಅಧ್ಯಕ್ಷ ಮತ್ತು ಶಾಸಕ ಷಡಾಕ್ಷರಿ ಸಿಎಂ ಮನವೊಲಿಕೆ ಮಾಡಿದ್ದರಿಂದ 1,600 ಕೋಟಿ ರೂ. ನೀಡಲಾಗಿದೆ.
ರಾಜ್ಯದಲ್ಲಿ 13 ಸಾವಿರ ರೈತರಷ್ಟೇ ಸಾಲಸೌಲಭ್ಯ ಪಡೆಯುತ್ತಿದ್ದಾರೆ. ಮುಂದಿನ ವರ್ಷ ಹೆಚ್ಚಿನ ರೈತರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಸಾಲದ ಪ್ರಮಾಣ ಹೆಚ್ಚಳ ಮಾಡಲು ಬ್ಯಾಂಕ್ ಪೂರ್ವತಯಾರಿ ನಡೆಸುತ್ತಿದೆ. ರೈತರಿಗೆ ನೀಡುವ ಸಾಲದ ಮೊತ್ತವನ್ನು ಹೆಚ್ಚಳ ಮಾಡಿರುವುದರಿಂದ ಹೆಚ್ಚಿನ ರೈತರಿಂದ ಸಾಲಕ್ಕಾಗಿ ಬೇಡಿಕೆ ಬರುತ್ತಿದೆ. ಈ ಬಾರಿ 1,600 ಕೋಟಿ ಸಾಲ ನೀಡಲಾಗಿದೆ. ಮುಂದಿನ ವರ್ಷ ಈ ಪ್ರಮಾಣವನ್ನು ಹೆಚ್ಚಿಸಲು ಸರ್ಕಾರಕ್ಕೆ ಪಸಾವನೆ ಸಲ್ಲಿಸಲಾಗುವುದು.
ರೈತರಿಗೆ ಸಹಕಾರ ಸಂಘಗಳ ಮೂಲಕ ನೀಡುವ ಶೂನ್ಯ ಬಡ್ಡಿ ಬೆಳೆಸಾಲದ ಮಿತಿಯನ್ನು 3-5ಲಕ್ಷ ಏರಿಸುವ ಬಗ್ಗೆ ಸರ್ಕಾರದಿಂದ ಅಧಿಕೃತ ಆದೇಶ ಹೊರಬಿದ್ದಿದ್ದರೂ ಅನುದಾನ ಕೊರತೆಯಿಂದ ಹೆಚ್ಚುವರಿ ಸಾಲದ ಮೊತ್ತ ವಿತರಣೆಯಲ್ಲಿ ಗೊಂದಲ ಏರ್ಪಟ್ಟಿದೆ. ಶೇ.3ರ ಬಡ್ಡಿ ದರದಲ್ಲಿ ನೀಡುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಮಿತಿಯನ್ನು 10 ಲಕ್ಷದಿಂದ 15 ಲಕ್ಷ ರೂ.ಗ ಹೆಚ್ಚಿಸಲಾಗಿದೆ.
ನಿಗದಿತ ಅವಧಿಯೊಳಗೆ ಸಾಲ ಮರುಪಾವತಿ ಮಾಡದಿದ್ದರೆ, ಬಡ್ಡಿ ವರ ಹೆಚ್ಚುತ್ತದೆ. ಸೆ.12ರಂದು ಸಹಕಾರ ಇಲಾಖೆಯ ಮೂಲಕ ಸಾಲಮಿತಿ ಏರಿಕೆ ಆದೇಶ ಪಕಟಿಸಲಾಗಿದೆ. ಈ ಸಾಲ 365 ದಿನಗಳ ಅವಧಿ ಹೊಂದಿದ್ದು, ಪ್ರಸಕ್ತ 2023ರ ಏ.1ರಿಂದ ಮುಂದಿನ ವರ್ಷದ ಮಾ. 31ರ ಅವಧಿಯಲ್ಲಿ ಸಾಲ ಪಡೆದವರಿಗೆ ಮಾತ್ರ ಬಡ್ಡಿದರಗಳು ಅನ್ವಯವಾಗುತ್ತವೆ. ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆದರೆ, ಏರಿಕೆಯಾದ ಸಾಲದ ಮೊತ್ತವನ್ನು ಅಥವಾ ಜಿಲ್ಲಾ ಸಹಕಾರಿ ಬ್ಯಾಂಕ್ ವಿತರಿಸುವ ಬಗ್ಗೆ ಆದೇಶದಲ್ಲಿ ಸ್ಪಷ್ಟತೆ ಇಲ್ಲದಿರುವುದರಿಂದ ಸಾಲ ಯೋಜನೆ ಇನ್ನೂ ಗೊಂದಲದಿಂದ ಕೂಡಿದೆ.
ಎಷ್ಟು ಲಕ್ಷದವರೆಗೆ ಬಡ್ಡಿರಹಿತ ಸಾಲ ನೀಡುತ್ತಾರೆ? ಯಾವ ಬೆಳೆಗೆ ನೀಡುತ್ತಾರೆ?
ಮುಖ್ಯವಾಗಿ ಹೇಳಬೇಕೆಂದರೆ ಕಳೆದ ವರ್ಷದಿಂದ ಈಗ 2023-24 ನೇ ಸಾಲಿಗಾಗಿ ಬೆಳೆ ಬೆಳೆಯಲು ಬೆಳೆಸಾಲ ಪ್ರಮಾಣ ಹೆಚ್ಚು ಮಾಡುವುದನ್ನು ಪರಿಗಣನೆಗೆ ತೆಗೆದುಕೊಂಡು ಸಾಲದ ಮೊತ್ತವನ್ನು ನಿಗದಿಪಡಿಸುವುದಕ್ಕೆ ಸರ್ಕಾರವು ಬಜೆಟ್ ಮಂಡನೆ ಅಲ್ಲಿ ಸ್ಪಷ್ಟಪಡಿಸಿದೆ. ಅದರಲ್ಲಿ ಮುಖ್ಯವಾದುದು ಎಂದರೆ ಅಲ್ಪಾವಧಿ ಬೆಳೆಸಾಲ ಹೆಚ್ಚಿಸುವುದರ ಕುರಿತು ಮಾತನಾಡಿದ ಮುಖ್ಯಮಂತ್ರಿ ಅವರು ಬಡ್ಡಿರಹಿತ ಬೆಳೆಸಾಲವನ್ನು 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡಿದೆ. ಏಪ್ರಿಲ್ 1ರಿಂದ ಈ ಯೋಜನೆಯನ್ನು ಜಾರಿಗೆ ತರಲು ಮುಂದಾಗಿತ್ತು ಆದರೆ ಸರ್ಕಾರದ ಹತ್ತಿರ ಅನುದಾನ ಕೊರತೆ ಇರುವುದರಿಂದ ಈ ಯೋಜನೆಯ ಬಗ್ಗೆ ಇನ್ನೂ ಸಹ ಗಮನಹರಿಸಿಲ್ಲ.
ಮುಖ್ಯವಾಗಿ ರೈತರು ಇನ್ನೂ ಮುಂದೆ ಗಮನಿಸಬೇಕಾದ ಅಂಶವೆಂದರೆ ನಿವು ಯಾವುದೇ ಸಾಲ ತೆಗೆಯಲು ಹೋದಾಗ ಅಥವಾ ಬೆಳೆಸಾಲವನ್ನು ಬ್ಯಾಂಕುಗಳಿಂದಲೇ ಪಡೆದುಕೊಳ್ಳಬೇಕು. ಖಾಸಗಿ ಲೇವಾದೇವಿಗಾರರು ಅಥವಾ ಮೀಟರ್ ಬಡ್ಡಿಯ ಮೇಲೆ ಪಡೆದುಕೊಂಡು ಸಂಕಷ್ಟಕ್ಕೀಡಾಗಬಾರದು ಎಂದು ಸಲಹೆ ನೀಡಿದರು. ಇದರಿಂದ ಕೆಲವು ರೈತರಿಗೆ ಭಾರಿ ಮೋಸ ಆಗಿದೆ. ಅದೇ ರೀತಿ ಎಲ್ಲಾ ರೈತರಿಗೆ ಮೋಸ ಆಗದಂತೆ ನೋಡಿಕೊಳ್ಳಬೇಕು. ನೀವು ಸಾಲ ಪಡೆಯಲು ಖುದ್ದಾಗಿ ಬ್ಯಾಂಕ್ ಭೇಟಿ ನೀಡಿ ತೆಗೆದುಕೊಳ್ಳಬೇಕು.
ಅದೇ ರೀತಿ ಹೆಚ್ಚಾಗಿ ಉತ್ತರ ಕರ್ನಾಟಕದಲ್ಲಿ ಕಬ್ಬು ಬೆಳೆಯುತ್ತಿದ್ದು, ರೈತರಿಗೆ ಸಿಹಿ ಸಾಲದ ಅವಶ್ಯಕತೆ ಬಹಳ ಇದೆ. ಕಬ್ಬು ಬೆಳೆಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಖರ್ಚು ವೆಚ್ಚಗಳಲ್ಲಿ ಗಣನೀಯ ಹೆಚ್ಚಳವಾಗಿರುವುದರಿಂದ ಕಬ್ಬು ಬೆಳೆಸಾಲ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ರೈತರು ಹಲವು ಬಾರಿ ಸರ್ಕಾರಕ್ಕೆ ಹಾಗೂ ವೈಯಕ್ತಿಕ ನನಗೆ ಮನವಿ ಮಾಡಿಕೊಂಡರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಕಳೆದ ಬಾರಿ 56 ಸಾವಿರ ಇರುವುದನ್ನು ಈ ಬಾರಿ 71 ಸಾವಿರ ನಿಗದಿಪಡಿಸಲು ಉಳಿದಂತೆ ತಂಬಾಕು ಸೇರಿ ಎಲ್ಲ ಬೆಳೆಸಾಲ ಪ್ರಮಾಣವನ್ನು ಶೇ .10 ರಷ್ಟು ಹೆಚ್ಚಿಸಲು ಶಿಫಾರಸ್ಸು ಮಾಡಲಾಗುವುದು ಎಂದರು.
ಜಿಲ್ಲಾಧಿಕಾರಿ ಅವರು ಮತ್ತೋಂದು ಮಹತ್ವದ ವಿಷಯ ವ್ಯಕ್ತಪಡಿಸಿದರು. ಇನ್ನೂ ಮುಂದೆ 1.60 ಲಕ್ಷವರೆಗಿನ ಬೆಳೆಸಾಲಕ್ಕೆ ಭೋಜಾ ಇಲ್ಲ. 1.60 ಲಕ್ಷ ವರೆಗೆ ಯಾವುದೇ ದಾಖಲೆಗಳಿಲ್ಲದೇ ಪಹಣಿ ಮತ್ತಿತರ ಸರಳ ದಾಖಲೆಗಳ ಆಧಾರದ ಮೇಲೆ ಸಾಲವನ್ನು ನೀಡಬೇಕು. ಈ ಸಾಲಕ್ಕೆ ಭೋಜಾ ಏರಿಸುವುದಿಲ್ಲ. 1.60 ಲಕ್ಷದ ವರೆಗೆ ಮಾತ್ರ ಭೋಜಾ ಇರುವುದಿಲ್ಲ. ಇದರಿಂದ ರೈತರಿಗೆ ಸಹ ಒಳ್ಳೆಯ ನಿರ್ಧಾರ ಆಗಿದೆ. ಒಂದು ವೇಳೆ 1.60 ಲಕ್ಷ ಬೆಳೆಸಾಲಕ್ಕೆ ಭೋಜಾ ಏರಿಸಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಎಚ್ಚರಿಕೆ ನೀಡಿದರು. 1.60 ಲಕ್ಷ ವರೆಗೆ ಯಾವುದೇ ದಾಖಲೆಗಳಿಲ್ಲದೇ ಸಾಲವನ್ನು ನೀಡಲಾಗುತ್ತದೆ. ಈ ಸಾಲಕ್ಕೆ ಭೋಜಾ ಏರಿಸುವುದಿಲ್ಲ ಎಂದು ಲೀಡ್ ಬ್ಯಾಂಕಿನ ವ್ಯವಸ್ಥಾಪಕ ಸುಧೀಂದ್ರ ಕುಲಕರ್ಣಿ ತಿಳಿಸಿದರು .