ಅನ್ನದಾತರಿಗೆ ಕೇಂದ್ರ ಸರ್ಕಾರ ವಿಶೇಷ ಯೋಜನೆ ಜಾರಿಗೆ ತಂದಿದೆ. ಅದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ. ಈ ಯೋಜನೆಗೆ ಸೇರುವವರಿಗೆ ಮೋದಿ ಸರ್ಕಾರ ಪ್ರತಿ ವರ್ಷ ಉಚಿತವಾಗಿ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡುತ್ತಿದೆ. ಈ ಮಹತ್ವಾಕಾಂಕ್ಷಿ ಯೋಜನೆಯಿಂದ ಕೋಟ್ಯಾಂತರ ರೈತರು ಪ್ರಯೋಜನ ಪಡೆಯುತ್ತಿದ್ದಾರೆ. 19ನೇ ಕಂತಿನ ಹಣ ಬಿಡುಗಡೆಯಾಗುವುದು ತುಸು ವಿಳಂಬವಾದ ಹಿನ್ನೆಲೆಯಲ್ಲಿ ಮುಂದಿನ ಕಂತಿನ ಹಣ ಯಾವಾಗ ಬಿಡುಗಡೆ ಆಗಬಹುದು ಎಂಬ ಕಾತರತೆ ಈ ಯೋಜನೆಯ ಫಲಾನುಭವಿಗಳಲ್ಲಿ ಮನೆಮಾಡಿದೆ.
ಪಿಎಂ ಕಿಸಾನ್ ಯೋಜನೆಯ 19 ನೇ ಕಂತಿನ ದಿನಾಂಕ ಮತ್ತು ಮೊತ್ತ ವಾರ್ಷಿಕವಾಗಿ ₹ 6,000, ₹ 2,000 ರ ಮೂರು ಸಮಾನ ಕಂತುಗಳಲ್ಲಿ ವಿತರಿಸಲಾಗುತ್ತದೆ. ನಿರೀಕ್ಷಿತ ವಿತರಣೆ: ಫೆಬ್ರವರಿ 2025 ರ ಮೊದಲ ವಾರದಲ್ಲಿ ನಿರೀಕ್ಷಿಸಲಾಗಿದೆ. ಹಿಂದಿನ ಕಂತು: 18 ನೇ ಕಂತನ್ನು ಅಕ್ಟೋಬರ್ 5, 2024 ರಂದು ಬಿಡುಗಡೆ ಮಾಡಲಾಯಿತು. ಪಿಎಂ ಕಿಸಾನ್ ಯೋಜನೆಗೆ ಅರ್ಹರಾಗಲು, ರೈತರು ಈ ಕೆಳಗಿನ ಅವಶ್ಯಕತೆಗಳನ್ನು ಪೂರೈಸಬೇಕು. ಮೊದಲಿಗೆ ಇಕೆವೈಸಿ ಪೂರ್ಣಗೊಳಿಸಿಬೇಕು. ನಂತರ ನಿಮ್ಮ ಬ್ಯಾಂಕ್ ಖಾತೆಯನ್ನು ಆಧಾರ್ನೊಂದಿಗೆ ಲಿಂಕ್ ಮಾಡಿರಬೇಕು. ನಿಮ್ಮ ಭೂ ದಾಖಲೆಗಳನ್ನು ಪರಿಶೀಲಿಸಿ ಸಲ್ಲಿಕೆ ಮಾಡಿರಬೇಕು.ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿರುವ “PM ಕಿಸಾನ್ ಮೊಬೈಲ್ ಅಪ್ಲಿಕೇಶನ್” ನಲ್ಲಿ ಮುಖದ ದೃಢೀಕರಣ ವೈಶಿಷ್ಟ್ಯವನ್ನು ಬಳಸಿಕೊಂಡು ರೈತರು ತಮ್ಮ eKYC ಅನ್ನು ಮನೆಯಿಂದಲೇ ಸುಲಭವಾಗಿ ಪೂರ್ಣಗೊಳಿಸಬಹುದು.
ಪರ್ಯಾಯವಾಗಿ, ನೀವು ಅಧಿಕೃತ PM ಕಿಸಾನ್ ವೆಬ್ಸೈಟ್ಗೆ ಭೇಟಿ ನೀಡಬಹುದು ಮತ್ತು eKYC ಆಯ್ಕೆಯನ್ನು ಆಯ್ಕೆ ಮಾಡಬಹುದು. ನೀವು ತೊಂದರೆಗಳನ್ನು ಎದುರಿಸಿದರೆ, ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರದಲ್ಲಿ (CSC) ಸಹಾಯ ಲಭ್ಯವಿದೆ.ಪಿಎಂ ಕಿಸಾನ್ ಹಣವನ್ನು ನೇರ ಲಾಭ ವರ್ಗಾವಣೆ (ಡಿಬಿಟಿ) ವ್ಯವಸ್ಥೆಯ ಮೂಲಕ ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗುತ್ತದೆ.
ನಿಮ್ಮ ಬ್ಯಾಂಕ್ ಖಾತೆಯನ್ನು ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡುವುದು ಅತ್ಯಗತ್ಯ. ನೀವು ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ, ಈ ಸಂಪರ್ಕವನ್ನು ಪರಿಶೀಲಿಸಲು ಖಚಿತಪಡಿಸಿಕೊಳ್ಳಿ. DBT ಆಯ್ಕೆಯನ್ನು ಸಕ್ರಿಯಗೊಳಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ; ಇಲ್ಲದಿದ್ದರೆ, ರೂ 2,000 ಕಂತು ಜಮಾ ಆಗುವುದಿಲ್ಲ. ಅಪ್ಡೇಟ್(e-kyc) ಮಾಡದಿದ್ದರೆ ಪಿ.ಎಂ ಕಿಸಾನ್ ಹಣ ಬರಲ್ಲ! ಕೇಂದ್ರ ಬಿಜೆಪಿ ಸರ್ಕಾರವು ಪರಿಚಯಿಸಿರುವ ಪ್ರಮುಖ ಯೋಜನೆಗಳಲ್ಲಿ ಒಂದಾಗಿರುವ ಪಿ.ಎಂ ಕಿಸಾನ್ (ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ)ನ 19ನೇ ಕಂತಿನ ಹಣಕ್ಕಾಗಿ ಜನ ಕಾಯುತ್ತಿದ್ದಾರೆ. ಆದರೆ, ಈ ಒಂದು ಅಪ್ಡೇಟ್ ಮಾಡಿಕೊಳ್ಳದೆ ಇದ್ದರೆ ನಿಮಗೆ ಪಿ.ಎಂ ಕಿಸಾನ್ ಕಂತಿನ ಹಣ ಮಿಸ್ ಆಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರವು ರೈತರಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ಎರಡು ಸಾವಿರ ರೂಪಾಯಿಯಂತೆ ವಾರ್ಷಿಕ ಆರು ಸಾವಿರ ರೂಪಾಯಿಯನ್ನು ಪಿ.ಎಂ ಕಿಸಾನ್ನ ಮೂಲಕ ನೀಡುತ್ತಿದೆ.
ಈಗಾಗಲೇ 18ನೇ ಕಂತಿನ ಹಣವನ್ನು ರೈತರ ಖಾತೆಗೆ ಜಮೆ ಮಾಡಲಾಗಿದ್ದು, ರೈತರು 19ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ಈ ನಡುವೆಯೇ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಮಹತ್ವದ ಸೂಚನೆಯೊಂದು ಬಂದಿದ್ದು, ಈ ನಿಯಮವನ್ನು ಒಂದೊಮ್ಮೆ ನೀವು ಪಾಲಿಸದೆ ಇದ್ದರೆ, ಈ ಬಾರಿಯ ಪಿ.ಎಂ ಕಿಸಾನ್ ಕಂತಿನ ಹಣ ಮಿಸ್ ಆಗುವ ಸಾಧ್ಯತೆ ದಟ್ಟವಾಗಿದೆ.
ಅದು ಏನು ಎನ್ನುವ ವಿವರ ಇಲ್ಲಿದೆ.!
ಪಿಎಂ ಕಿಸಾನ್ನ ಮುಂದಿನ ಕಂತಿನ ಹಣ ಬರಬೇಕಾದರೆ ನೀವು ಖಂಡಿತವಾಗಿಯೂ ಇ- ಕೆವೈಸಿ (e-kyc) ಮಾಡಿಸಿಕೊಳ್ಳಬೇಕು. PM – Kisanನ ಮುಂದಿನ ಕಂತಿನ ಹಣ ಬರಬೇಕಾದರೆ, ತಪ್ಪದೆ ಕೂಡಲೇ ನೀವು ಇ -ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ರಾಜ್ಯ ಸರ್ಕಾರ ಮನವಿ ಮಾಡಿದೆ
.
ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡಿ (e_kyc)
: ಇ -ಕೆವೈಸಿ ಮಾಡಿಸುವುದು ಕಡ್ಡಾಯ: ಇನ್ನು ಪಿಎಂ ಕಿಸಾನ್ ಯೋಜನೆಯ ಅಡಿಯಲ್ಲಿ ಬರುವ ರೈತರು ಕಡ್ಡಾಯವಾಗಿ ಈ ಬಾರಿ (ಮಾಡಿಸದೆ ಇರುವವರು) ಇ- ಕೆವೈಸಿ ಮಾಡಿಸಬೇಕು. ಪಿಎಂ ಕಿಸಾನ್ ಯೋಜನೆಯ ಅಡಿಯಲ್ಲಿ ರೈತರು ಆರ್ಥಿಕ ನೆರವನ್ನು ಪಡೆಯಬೇಕಾದರೆ, ಇ – ಕೆವೈಸಿ ಮಾಡಿಸುವುದು ಕಡ್ಡಾಯ ಮಾಡಲಾಗಿದೆ. ಇ -ಕೆವೈಸಿ ಮಾಡಿಸಲು ಬಾಕಿ ಇರುವ ರೈತರು ಕೂಡಲೇ ಇ – ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಸರ್ಕಾರ ಸೂಚನೆ ನೀಡಿದೆ.
ಪಿಎಂ ಕಿಸಾನ್ಗೆ ಇ- ಕೆವೈಸಿ ಮಾಡಿಸುವುದು ಹೇಗೆ ?
ಒಟಿಪಿ ಆಧಾರಿತ ಇ -ಕೆವೈಸಿ: ಒಟಿಪಿ (otp) ಆಧಾರಿತ ಇ -ಕೆವೈಸಿಯು (e-kyc) ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಪೋರ್ಟಲ್ (pm -kisan portal) ನಲ್ಲಿ ಹಾಗೂ ಮೊಬೈಲ್ ಅಪ್ಲಿಕೇಷನ್ನಲ್ಲಿ ಲಭ್ಯವಿರುತ್ತದೆ. (https://pmkisan.gov.in).
ಬಯೋಮೆಟ್ರಿಕ್:
ಬಯೋಮೆಟ್ರಿಕ್ (Biometric) ಆಧಾರಿತ ಇ -ಕೆವೈಸಿಯನ್ನೂ ನೀವು ಮಾಡಿಸಬಹುದಾಗಿದೆ. ನಿಮ್ಮ ಹತ್ತಿರದ ನಾಗರಿಕ ಸೇವಾ ಕೇಂದ್ರ ಅಥವಾ ಗ್ರಾಮ ಒನ್ ಕೇಂದ್ರಗಳಲ್ಲಿ ಮಾಡಿಸಬಹುದಾಗಿರುತ್ತದೆ.
ಫೇಸ್ ಸ್ಕ್ಯಾನ್:
ಫೇಸ್ ಸ್ಕ್ಯಾನ್ನ ಮೂಲಕವೂ ಇ – ಕೆವೈಸಿ ಮಾಡಿಸಬಹುದಾಗಿದೆ. ಮುಖ (Face authentication) ದೃಢೀಕರಣದ ಮೂಲಕವೂ ಇದು ಸಾಧ್ಯವಿದೆ. ಪಿಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್ನಲ್ಲಿ ಈ ಸೌಲಭ್ಯ ಲಭ್ಯವಿದೆ. ರೈತರು ಈ ಮೇಲಿನ ಯಾವುದಾದರೂ ಒಂದು ಆಯ್ಕೆಯ ಮೂಲಕ ಇ – ಕೆವೈಸಿ ಮಾಡಿಸಬಹುದಾಗಿದೆ.