ಕಳಪೆ ಡಿಎಪಿ ಮಾರಾಟ, ರೈತರೇ ನ್ಯಾನೋ ಡಿಎಪಿ ಬಳಸಿ

ರೈತರೇ ಇವತ್ತು ನೀವು ಒಂದು ಮುಖ್ಯವಾದ ವಿಷಯ ತಿಳಿಯಬೇಕಾಗಿದೆ. ರಾಜ್ಯದಾದ್ಯಂತ ಮುಂಗಾರು ಮಳೆ ಬಿರುಸು ಪಡೆದಿರುವಂತೆಯೇ ಕೃಷಿ ಚಟುವಟಿಕೆಗಳು ಗರಿಗೆದರಿವೆ.

ಕೆಲವು ಕಡೆ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಆದರೆ, ಸಕಾಲದಲ್ಲಿ ರಸಗೊಬ್ಬರ, ಬಿತ್ತನೆ ಬೀಜಗಳು ಲಭ್ಯವಾಗದೇ ರೈತರು ಪರದಾಡುತ್ತಿದ್ದಾರೆ. ಡಿಎಪಿ ಕೊರತೆ ಅಂತೂ ರೈತರನ್ನು ಹೆಚ್ಚು ಬಾಧಿಸುತ್ತಿದೆ. ಈ ಬಾರಿ ಉತ್ತಮ ಮಳೆ ಬೀಳುತ್ತದೆ ಎಂಬ ಮುನ್ಸೂಚನೆಯಿಂದ ರೈತರು ಖುಷಿಯಾಗಿದ್ದರು. ಆದರೆ, ಬಿತ್ತನೆ ಬೀಜ ಮತ್ತು ರಸಗೊಬ್ಬರ ಅಗತ್ಯ ಪ್ರಮಾಣದಲ್ಲಿ ಸಿಗದೇ ಅವರು ಮುಂಗಾರಿನ ಆರಂಭದಲ್ಲೇ ಸಂಕಷ್ಟಕ್ಕೀಡಾಗಿದ್ದಾರೆ. ಇದು ಪ್ರತಿವರ್ಷದ ಸಮಸ್ಯೆಯಾಗಿದ್ದು, ಸರ್ಕಾರ ಕೂಡಲೇ ಅನ್ನದಾತರ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ ಎಂದು ರೈತರು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಮುಂಗಾರು ಚಟುವಟಿಕೆಗಳಿಗೆ ಅತ್ಯವಿರುವಷ್ಟು ರಸಗೊಬ್ಬರ ದಾಸ್ತಾನಿದೆ ಎಂದು ಕೃಷಿ ಇಲಾಖೆ ಅಂಕಿ ಅಂಶಗಳನ್ನು ತೋರಿಸುತ್ತಿದೆ. ಆದರೆ, ರೈತರು ಅದಕ್ಕೆ ವ್ಯತಿರಿಕ್ತ ಕಥೆ ಹೇಳುತ್ತಿದ್ದು, ಬೀಜ ಮತ್ತು ರಸಗೊಬ್ಬರ ಸಕಾಲದಲ್ಲಿ ಪೂರೈಕೆಯಾಗುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ. ಅದಕ್ಕಾಗಿ ನ್ಯಾನೋ ಡಿಎಪಿ ಬಳಸಿ ಎಂದು ಸರ್ಕಾರವು ಸಲಹೆ ನೀಡುತ್ತಿದೆ.

ನ್ಯಾನೋ DAP ಯ ಅನುಕೂಲಗಳು:
ಹೆಚ್ಚಿನ ದಕ್ಷತೆ: ನ್ಯಾನೋ DAP ಸಸ್ಯಗಳಿಗೆ ಸುಲಭವಾಗಿ ಲಭ್ಯವಾಗುವಂತೆ ಪೋಷಕಾಂಶಗಳನ್ನು ಒದಗಿಸುತ್ತದೆ, ಹೀಗಾಗಿ ಸಾಂಪ್ರದಾಯಿಕ DAP ಗಿಂತ ಕಡಿಮೆ ಪ್ರಮಾಣದಲ್ಲಿ ಬಳಸಬಹುದು & ಕಡಿಮೆ ಪ್ರಮಾಣ: ಕಡಿಮೆ ಪ್ರಮಾಣದ ನ್ಯಾನೋ DAP ಯೊಂದಿಗೆ, ರೈತರು ಹೆಚ್ಚಿನ ಇಳುವರಿಯನ್ನು ಪಡೆಯಬಹುದು.

ಪರಿಸರ ಸ್ನೇಹಿ: ನ್ಯಾನೋ DAP ಯ ಕಡಿಮೆ ಬಳಕೆಯು ರಸಗೊಬ್ಬರಗಳ ಅತಿಯಾದ ಬಳಕೆಯಿಂದ ಉಂಟಾಗುವ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ.

ಬಳಸುವ ವಿಧಾನ:

ನ್ಯಾನೋ DAP ಅನ್ನು ದ್ರಾವಣ ರೂಪದಲ್ಲಿ ಸಿಂಪಡಿಸಬಹುದು ಅಥವಾ ಬೀಜಗಳೊಂದಿಗೆ ಸಂಸ್ಕರಿಸಬಹುದು.

ಸಾಮಾನ್ಯವಾಗಿ 1 ಹಕ್ಟೇರ್ ರಾಗಿ ಬೆಳೆ ಬೆಳೆಯಲು ಯೂರಿಯಾ ಮತ್ತು ಡಿ.ಎ.ಪಿ ಬಳಸಿದರೆ ರೂ, 1630/-ಬೇಸಾಯ ವೆಚ್ಚವಾಗುತ್ತದೆ. ರೈತರು ಯೂರಿಯಾ ಹಾಗೂ ಡಿಎಪಿಯನ್ನು ಹೆಚ್ಚಾಗಿ ಬಳಸುತ್ತಿದ್ದು, ಇವುಗಳಲ್ಲಿ ಸಾರಜನಕ ಮತ್ತು ರಂಜಕದ ಅಂಶ ಮಾತ್ರವಿರುತ್ತದೆ.

ಆದರೆ ಬೆಳೆಗಳಿಗೆ ರೋಗ ನಿರೋದಕ ಶಕ್ತಿ ನೀಡಿ ಕಾಳಿನ ತೂಕ ಹೆಚ್ಚಿಸಲು ಅತ್ಯಂತ ಅವಶ್ಯಕವಾಗಿರುವ ಪೋಟ್ಯಾಷ್ ಲಭ್ಯವಿರುವುದಿಲ್ಲ. ಪ್ರತ್ಯೇಕವಾಗಿ ಪೋಟ್ಯಾಷ್ ಪೋಷಕಾಂಶ ಸೇರಿಸಲು 33 ಕೆ.ಜಿ ಎಂಒಪಿ ಬೇಕಾಗುತ್ತದೆ. 33 ಕೆ.ಜಿ ಎಂಒಪಿಗೆ 1132 ರೂ.ಗಳು ವೆಚ್ಚವಾಗುತ್ತದೆ. ಒಟ್ಟಾರೆ ಪ್ರತಿ ಹೆಕ್ಟೇರಿಗೆ 2761 ರೂ.ಗಳು ವೆಚ್ಚವಾಗುತ್ತದೆ.

ಗಮನಿಸಬೇಕಾದ ಅಂಶ:

ನ್ಯಾನೋ DAP ಅನ್ನು ಬಳಸುವ ಮೊದಲು, ತಯಾರಕರ ಸೂಚನೆಗಳನ್ನು ಸರಿಯಾಗಿ ಓದಿ ಮತ್ತು ಅನುಸರಿಸುವುದು ಮುಖ್ಯ.

ಹಾವೇರಿ, ಬೀದ‌ರ್, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಡಿಎಪಿ ರಸಗೊಬ್ಬರದ ಕೊರತೆ ಇದೆ ಎಂದು ರೈತರು ಪ್ರತಿಭಟನೆ ನಡೆಸಿದ್ದಾರೆ. ‘ಕೃಷಿ ಇಲಾಖೆ ಅಧಿಕಾರಿಗಳು ಅಂಕಿ-ಅಂಶಗಳಲ್ಲಿ ಮಾತ್ರ ಡಿಎಪಿಯ ದಾಸ್ತಾನು ತೋರಿಸುತ್ತಾರೆ. ಪರ್ಯಾಯ ಗೊಬ್ಬರಗಳನ್ನು ಖರೀದಿಸಿದರೆ (ಲಿಂಕ್ ಮಾಡಿ) ಮಾತ್ರವೇ ಡಿಎಪಿ ಕೊಡುತ್ತೇವೆ ಎಂದು ನಿಬಂಧನೆ ಹಾಕುತ್ತಿದ್ದಾರೆ’ ಎಂಬುದು ಹಾವೇರಿ ರೈತರೊಬ್ಬರ ದೂರು.

‘ಬಿತ್ತನೆ ನಂತರ ಬೀಜಗಳು ಮೊಳಕೆಯೊಡೆಯಲು ಡಿಎಪಿ ಅಗತ್ಯವಾಗಿದೆ. ಒಂದು ಎಕರೆಗೆ ಒಂದೂವರೆ ಚೀಲದಷ್ಟು ಡಿಎಪಿ ಬೇಕು. ಬಿತ್ತನೆಯಾದ ಮೇಲೆ ಡಿಎಪಿ ಹಾಕದಿದ್ದರೆ, ಬೀಜ ಮೊಳೆಯುವುದಿಲ್ಲ. ಈಗ ಬಿತ್ತನೆ ಮುಗಿದಿದ್ದು ಡಿಎಪಿ ಗೊಬ್ಬರದ ಕೊರತೆಯಿಂದ ಸಮಸ್ಯೆಯಾಗಿದೆ’ ಎಂದು ರೈತರು ಹೇಳುತ್ತಿದ್ದಾರೆ.

ಹಾವೇರಿ ತಾಲ್ಲೂಕಿನಲ್ಲಿ ಡಿಎಪಿ ಗೊಬ್ಬರಕ್ಕೆ ರೈತರಿಂದ ಹೆಚ್ಚಿನ ಬೇಡಿಕೆ ಇದೆ. ಮೇ ತಿಂಗಳಲ್ಲಿ 4,800 ಟನ್ ಡಿಎಪಿಗೆ ಬೇಡಿಕೆ ಸಲ್ಲಿಸಲಾಗಿತ್ತು. 1,800 ಟನ್ ಡಿಎಪಿ ಪೂರೈಸಲಾಗಿದೆ. ಇದರಿಂದಾಗಿ ಡಿಎಪಿ ಕೊರತೆ ಉಂಟಾಗಿದ್ದು, ಪರ್ಯಾಯ ಗೊಬ್ಬರ ಬಳಸುವಂತೆ ರೈತರಿಗೆ ತಿಳಿಸುತ್ತಿದ್ದೇವೆ’ ಎಂದು ಕೃಷಿ ಇಲಾಖೆ ಅಧಿಕಾರಿ ಜೂನ್ 4ರಂದು ನಡೆದ ಕೆಡಿಪಿ ಸಭೆಗೆ ತಿಳಿಸಿದ್ದರು.

ಇತರೆ ಸಂಯುಕ್ತ ರಸಗೊಬ್ಬರಗಳಾದ 14:35:14, 11:30:14, 10:26:26 ಬಳಸಿದ್ದಲ್ಲಿ ಎಲ್ಲಾ ಎನ್.ಪಿ.ಕೆ ಪೋಷಕಾಂಶಗಳು ಲಭ್ಯವಿದ್ದು, ಪ್ರತಿ ಹೆಕ್ಟೇರಿಗೆ 2500 ಗಳಿಗಿಂತ ಕಡಿಮೆ ವೆಚ್ಚವಾಗುತ್ತದೆ. ಸಂಯುಕ್ತ ರಸಗೊಬ್ಬರಗಳನ್ನು ಬಳಸುವುದರಿಂದ ಸಸಿಗಳಿಗೆ ಅವಶ್ಯವಿರುವ ಪೊಟ್ಯಾಷ್ ಪೋಷಕಾಂಶವು ಲಭ್ಯವಾಗಿ ಸಸಿಗಳಲ್ಲಿ ಕಿಣ್ವಗಳನ್ನು ಸಕ್ರಿಯಗೊಳಿಸಿ ನೀರು ಮತ್ತು ಪೋಷಕಾಂಶಗಳ ಸಾಗಾಣೆಗೆ ಸಹಾಯ ಮಾಡುವುದಲ್ಲದೇ ಬರ ಪರಿಸ್ಥಿತಿಯಲ್ಲಿಯೂ ಬೆಳೆಗಳನ್ನು ಹಸಿರಾಗಿಡಲು ಸಹಾಯ ಮಾಡುತ್ತದೆ ಹಾಗೂ ಬೆಳೆ ಉತ್ಪಾದಕತೆ ಮತ್ತು ಗುಣಮಟ್ಟ ಸುಧಾರಿಸಲು ಕಾರಣವಾಗುತ್ತದೆ.

ನಕಲಿ ಡಿಎಪಿ ಮಾರಾಟ: ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲೂ ಡಿಎಪಿ ಕೊರತೆಯಿದ್ದು, ಇದರ ಲಾಭಪಡೆಯಲು ವಂಚಕರು ನಕಲಿ ಡಿಎಪಿ ತಯಾರಿಸಿ (ಮಣ್ಣಿಗೆ ಬಣ್ಣ ಬಳಿದು) ಮಾರಾಟ ಮಾಡಿ ರೈತರನ್ನು ವಂಚಿಸುತ್ತಿದ್ದಾರೆ. ರೋಣ ತಾಲ್ಲೂಕಿನ ಮಾಡಲಗೇರಿಯಲ್ಲಿ 475 ಚೀಲ ಹಾಗೂ ಶಿರಹಟ್ಟಿ ತಾಲ್ಲೂಕಿನ ಕಡಕೋಳ ಗ್ರಾಮದಲ್ಲಿ 45 ಚೀಲ ನಕಲಿ ಡಿಎಪಿಯನ್ನು ಇಲಾಖೆಯ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

Spread positive news

Leave a Reply

Your email address will not be published. Required fields are marked *