PM KISAN: ಪಿ.ಎಂ ಕಿಸಾನ್ ₹2000 ರೂ. ಹಣ ಬಿಡುಗಡೆ? 20ನೇ ಕಂತಿನ ದಿನಾಂಕ ಪ್ರಕಟಣೆ!

ಭಾರತ ಸರ್ಕಾರ ಹಲವು ಯೋಜನೆಗಳನ್ನು ಪರಿಚಯಿಸುತ್ತಿದೆ. ಮೋದಿ ಸರ್ಕಾರ ರೈತರಿಗಾಗಿ ಹಲವು ಯೋಜನೆಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಒಂದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ. ಈ ಯೋಜನೆಯ ಲಾಭ ರೈತರಿಗೆ ಸಿಗಲಿದೆ. ನೀವು ಈ ಯೋಜನೆಗೆ ಅರ್ಹರಾಗಿದ್ದರೆ, ಈ ಯೋಜನೆಯಡಿಯಲ್ಲಿ ಪಡೆದ ಕಂತುಗಳ ಪ್ರಯೋಜನಗಳನ್ನು ನೀವು ಪಡೆಯಬಹುದು.ಇಲ್ಲಿಯವರೆಗೆ 19ನೇ ಕಂತಿನ ಹಣವನ್ನು ಪಡೆದ ರೈತರು ಈಗ 20ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ.

ಈ ಯೋಜನೆಗೆ ಕೇಂದ್ರ ಸರ್ಕಾರ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಹಣವನ್ನು ಬಿಡುಗಡೆ ಮಾಡುತ್ತದೆ. ಇದು ರೂ.ಗಳನ್ನು ಬಿಡುಗಡೆ ಮಾಡುತ್ತದೆ. ವರ್ಷಕ್ಕೆ 6000 ರೂ.ಗಳ ಮೂರು ಕಂತುಗಳಲ್ಲಿ. ರೈತರ ಖಾತೆಗಳಿಗೆ ತಲಾ 2000 ರೂ.

ಆದಾಗ್ಯೂ, 19 ನೇ ಕಂತಿನ ಹಣವನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದ್ದರೂ, 20ನೇ ಕಂತಿನ ಹಣ ಜೂನ್ 2025ರಲ್ಲಿ ಬಿಡುಗಡೆಯಾಗಬಹುದು. ಆದ್ರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ, ಜೂನ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಆದಾಗ್ಯೂ, ಪಿಎಂ ಕಿಸಾನ್ ಯೋಜನೆಯ ಲಾಭ ಪಡೆಯುವ ರೈತರು ಕೆವೈಸಿಗೆ ಒಳಗಾಗಬೇಕಾಗುತ್ತದೆ. KYC ಇಲ್ಲದವರಿಗೆ ಹಣ ಸಿಗುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ಸಂಪೂರ್ಣ KYC ಮಾಡದ ರೈತರ ಹಣವನ್ನು ಸರ್ಕಾರ ನಿಲ್ಲಿಸುತ್ತದೆ. ಅದಕ್ಕಾಗಿಯೇ KYC ಮಾಡುವುದು ಕಡ್ಡಾಯವಾಗಿದೆ. ಇದಕ್ಕಾಗಿ, ನೀವು ನಿಮ್ಮ ಹತ್ತಿರದ ಸೇವಾ ಕೇಂದ್ರ ಅಥವಾ ಯಾವುದೇ ಆನ್‌ಲೈನ್ ಕೇಂದ್ರಕ್ಕೆ ಭೇಟಿ ನೀಡಿ ನಿಮ್ಮ KYC ಮಾಡಬಹುದು.

ಅಪ್ಡೇಟ್(e-kyc) ಮಾಡದಿದ್ದರೆ ಪಿ.ಎಂ ಕಿಸಾನ್ ಹಣ ಬರಲ್ಲ! ಕೇಂದ್ರ ಬಿಜೆಪಿ ಸರ್ಕಾರವು ಪರಿಚಯಿಸಿರುವ ಪ್ರಮುಖ ಯೋಜನೆಗಳಲ್ಲಿ ಒಂದು. ಪಿ.ಎಂ ಕಿಸಾನ್‌ (ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ)ನ 20ನೇ ಕಂತಿನ ಹಣಕ್ಕಾಗಿ ಜನ ಕಾಯುತ್ತಿದ್ದಾರೆ. ಆದರೆ, ಈ ಒಂದು ಅಪ್ಡೇಟ್‌ ಮಾಡಿಕೊಳ್ಳದೆ ಇದ್ದರೆ ನಿಮಗೆ ಪಿ.ಎಂ ಕಿಸಾನ್‌ ಕಂತಿನ ಹಣ ಮಿಸ್‌ ಆಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರವು ರೈತರಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ಎರಡು ಸಾವಿರ. ರೂಪಾಯಿಯಂತೆ ವಾರ್ಷಿಕ ಆರು ಸಾವಿರ ರೂಪಾಯಿಯನ್ನು ಪಿ.ಎಂ ಕಿಸಾನ್‌ನ ಮೂಲಕ ನೀಡುತ್ತಿದೆ.

ಈಗಾಗಲೇ 19ನೇ ಕಂತಿನ ಹಣವನ್ನು ರೈತರ ಖಾತೆಗೆ ಜಮೆ ಮಾಡಲಾಗಿದ್ದು, ರೈತರು 20ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ಈ ನಡುವೆಯೇ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಮಹತ್ವದ ಸೂಚನೆಯೊಂದು ಬಂದಿದ್ದು. ಈ ನಿಯಮವನ್ನು ಒಂದೊಮ್ಮೆ ನೀವು ಪಾಲಿಸದೆ ಇದ್ದರೆ, ಈ ಬಾರಿಯ ಪಿ.ಎಂ ಕಿಸಾನ್‌ ಕಂತಿನ ಹಣ ಮಿಸ್‌ ಆಗುವ ಸಾಧ್ಯತೆ ದಟ್ಟವಾಗಿದೆ.

ಅದು ಏನು ಎನ್ನುವ ವಿವರ ಇಲ್ಲಿದೆ.!

ಪಿಎಂ ಕಿಸಾನ್‌ನ ಮುಂದಿನ ಕಂತಿನ ಹಣ ಬರಬೇಕಾದರೆ ನೀವು ಖಂಡಿತವಾಗಿಯೂ ಇ- ಕೆವೈಸಿ (e-kyc) ಮಾಡಿಸಿಕೊಳ್ಳಬೇಕು. PM – Kisanನ ಮುಂದಿನ ಕಂತಿನ ಹಣ ಬರಬೇಕಾದರೆ, ತಪ್ಪದೆ ಕೂಡಲೇ ನೀವು ಇ -ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ರಾಜ್ಯ ಸರ್ಕಾರ ಮನವಿ ಮಾಡಿದೆ.

ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡಿ (e_kyc)

ಇ -ಕೆವೈಸಿ ಮಾಡಿಸುವುದು ಕಡ್ಡಾಯ: ಇನ್ನು ಪಿಎಂ ಕಿಸಾನ್‌ ಯೋಜನೆಯ ಅಡಿಯಲ್ಲಿ ಬರುವ ರೈತರು. ಕಡ್ಡಾಯವಾಗಿ ಈ ಬಾರಿ (ಮಾಡಿಸದೆ ಇರುವವರು) ಇ- ಕೆವೈಸಿ ಮಾಡಿಸಬೇಕು. ಪಿಎಂ ಕಿಸಾನ್‌ ಯೋಜನೆಯ ಅಡಿಯಲ್ಲಿ ರೈತರು ಆರ್ಥಿಕ ನೆರವನ್ನು ಪಡೆಯಬೇಕಾದರೆ. ಇ – ಕೆವೈಸಿ ಮಾಡಿಸುವುದು ಕಡ್ಡಾಯ ಮಾಡಲಾಗಿದೆ. ಇ -ಕೆವೈಸಿ ಮಾಡಿಸಲು ಬಾಕಿ ಇರುವ ರೈತರು ಕೂಡಲೇ ಇ – ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಸರ್ಕಾರ ಸೂಚನೆ ನೀಡಿದೆ.

ಪಿಎಂ ಕಿಸಾನ್‌ಗೆ ಇ- ಕೆವೈಸಿ ಮಾಡಿಸುವುದು ಹೇಗೆ ?

ಒಟಿಪಿ ಆಧಾರಿತ ಇ -ಕೆವೈಸಿ: ಒಟಿಪಿ (otp) ಆಧಾರಿತ ಇ -ಕೆವೈಸಿಯು (e-kyc) ಕೇಂದ್ರ ಸರ್ಕಾರದ ಪಿಎಂ ಕಿಸಾನ್‌ ಪೋರ್ಟಲ್‌. (pm -kisan portal) ನಲ್ಲಿ ಹಾಗೂ ಮೊಬೈಲ್‌ ಅಪ್ಲಿಕೇಷನ್‌ನಲ್ಲಿ ಲಭ್ಯವಿರುತ್ತದೆ. (https://pmkisan.gov.in).

ಬಯೋಮೆಟ್ರಿಕ್‌: ಬಯೋಮೆಟ್ರಿಕ್‌ (Biometric) ಆಧಾರಿತ ಇ -ಕೆವೈಸಿಯನ್ನೂ ನೀವು ಮಾಡಿಸಬಹುದಾಗಿದೆ. ನಿಮ್ಮ ಹತ್ತಿರದ ನಾಗರಿಕ ಸೇವಾ ಕೇಂದ್ರ ಅಥವಾ ಗ್ರಾಮ ಒನ್‌ ಕೇಂದ್ರಗಳಲ್ಲಿ ಮಾಡಿಸಬಹುದಾಗಿರುತ್ತದೆ.

ಫೇಸ್‌ ಸ್ಕ್ಯಾನ್:
ಫೇಸ್‌ ಸ್ಕ್ಯಾನ್‌ನ ಮೂಲಕವೂ ಇ – ಕೆವೈಸಿ ಮಾಡಿಸಬಹುದಾಗಿದೆ. ಮುಖ (Face authentication) ದೃಢೀಕರಣದ ಮೂಲಕವೂ ಇದು ಸಾಧ್ಯವಿದೆ. ಪಿಎಂ ಕಿಸಾನ್‌ ಮೊಬೈಲ್‌ ಅಪ್ಲಿಕೇಶನ್‌ನಲ್ಲಿ ಈ ಸೌಲಭ್ಯ ಲಭ್ಯವಿದೆ. ರೈತರು ಈ ಮೇಲಿನ ಯಾವುದಾದರೂ ಒಂದು ಆಯ್ಕೆಯ ಮೂಲಕ ಇ – ಕೆವೈಸಿ ಮಾಡಿಸಬಹುದಾಗಿದೆ.

ನಿಮ್ಮ ಪಿಎಂ ಕಿಸಾನ್ ಸಮ್ಮಾನ್ ನಿಧಿ ಖಾತೆಯ ಸ್ಥಿತಿ ಪರಿಶೀಲಿಸಲು ಈ ಕೆಳಗಿನ ವಿಧಾನ ಅನುಸರಿಸಿ

· ಪಿಎಂ-ಕಿಸಾನ್ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ: https://pmkisan.gov.in/

· ಮುಖಪುಟದಲ್ಲಿ ‘ಫಾರ್ಮರ್ ಕಾರ್ನರ್’ ಆಯ್ಕೆ ಮಾಡಿ.

· ಅದರ ನಂತರ ‘ಫಲಾನುಭವಿ ಸ್ಥಿತಿ’ ಮೇಲೆ ಕ್ಲಿಕ್ ಮಾಡಿ

· ಡ್ರಾಪ್-ಡೌನ್ ಮೆನುನಿಂದ ನೀವು ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಅಥವಾ ಗ್ರಾಮವನ್ನು ಆಯ್ಕೆ ಮಾಡಬಹುದು.

· ನಿಮ್ಮ ಸ್ಥಿತಿಯನ್ನು ತಿಳಿಯಲು ‘ವರದಿ ಪಡೆಯಿರಿ’ ಮೇಲೆ ಕ್ಲಿಕ್ ಮಾಡಿ.

Spread positive news

Leave a Reply

Your email address will not be published. Required fields are marked *