Crop loan:ಕೃಷಿ ಸಾಲ ಪಡೆಯಲು ಬೇಕಾಗುವ ಹೊಸ ನಿಯಮಗಳ ಪಟ್ಟಿ ಇಲ್ಲಿದೆ

ನನ್ನ ರೈತ ಮಿತ್ರರೇ ರಾಜ್ಯದಲ್ಲಿ ಹಲವಾರು ಬದಲಾವಣೆಗಳನ್ನು ಕಂಡಿದ್ದು, ಈಗಾಗಲೇ ಹೊಸ ಸರ್ಕಾರವು ಕೂಡ ರಚನೆ ಆಗಿದೆ. ಹಾಗೂ ರೈತರು ಸಹ ಕೃಷಿ ಚಟುವಟಿಕೆಗಳಿಗೆ ಹೆಜ್ಜೆ ಹಾಕುತ್ತಿದ್ದಾರೆ. ಆದರೆ ಮಳೆ ಸಮಸ್ಯೆ ಎದುರಾಗಿದ್ದು ಈಗ ಸರ್ಕಾರವು ರೈತರ ಹಿತದೃಷ್ಟಿಯಿಂದ ಹಾಗೂ ರೈತರಿಗೆ ಕೃಷಿಯಲ್ಲಿ ಆರ್ಥಿಕ ಉತ್ತೇಜನ ನೀಡುವ ನಿಟ್ಟಿನಲ್ಲಿ, ಹಾಗೂ ರೈತರು ವ್ಯವಸಾಯ ಮಾಡಲು ಯಾವುದೇ ಹಣದ ತೊಂದರೆ ಆಗದಂತೆ ಹಲವಾರು ಯೋಜನೆಗಳನ್ನು ರೂಪಿಸಿದ್ದು, ರೈತರ ಹಿತದೃಷ್ಟಿಯನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ.

ರೈತರಿಗೆ 5 ಲಕ್ಷದವರೆಗೆ ಬಡ್ಡಿರಹಿತ ಸಾಲವನ್ನು ಯಾವಾಗ ನೀಡಲು ಪ್ರಾರಂಭಿಸುತ್ತದೆ? ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.
ಪ್ರೀಯ ರೈತರೇ ಸರ್ಕಾರವು ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು ರೈತರಿಗೆ ಅಲ್ಪಾವಧಿ, ಮಧ್ಯಮಾವಧಿ, ಹಾಗೂ ದೀರ್ಘಾವಧಿ ಸಾಲ ನೀಡಲು ಜುಲೈ 1ರಿಂದ ನೀಡಲು ಮುಂದಾಗಿತ್ತು ಆದರೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಈ ಯೋಜನೆಯ ಬಗ್ಗೆ ಎಲ್ಲಿಯೂ ಧ್ವನಿ ಎತ್ತಲಿಲ್ಲ ಹೀಗಾಗಿ ಸರ್ಕಾರಕ್ಕೂ ಇದರ ಬಗ್ಗೆ ಗಮನ ಹರಿಸಲು ಸ್ವತಹ ಸಚಿವರು ಮುಂದೆ ಬರಬೇಕಾಗಿದೆ. ಅದೇ ರೀತಿ ಕಡಿಮೆ ಜಮೀನು ಹೊಂದಿರುವ ರೈತರಿಗೆ ಕಳೆದ ಸಾಲಿನಲ್ಲಿ ಶಿಫಾರಸ್ಸು ಮಾಡಲಾಗಿರುವ ಅಲ್ಪಾವಧಿ ಬೆಳೆಸಾಲದ ಪ್ರಮಾಣವನ್ನು 2023-24 ನೇ ಸಾಲಿಗಾಗಿ ಪ್ರತಿಯೊಂದು ಬೆಳೆಗೆ ಶೇ .10 ರಷ್ಟು ಹೆಚ್ಚಿಸಲು ಶಿಫಾರಸ್ಸು ಮಾಡಲಾಗುವುದು. ಹಾಗೂ ರೈತರಿಗೆ ಆರ್ಥಿಕ ಉತ್ತೇಜನ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಅಲ್ಲಿ ಸ್ಪಷ್ಟಪಡಿಸಿದ್ದಾರೆ.

ಏನಿದು ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆ? ಯಾವ ರೈತರಿಗೆ ನೀಡಲಾಗುತ್ತದೆ?
ಮುಖ್ಯವಾಗಿ ಇದು ಒಂದು ಸರ್ಕಾರದ ಮಹತ್ವಾಕಾಂಕ್ಷಿ ನಿರ್ಧಾರ ಆಗಿದೆ. ರೈತರು ಕೃಷಿಯಲ್ಲಿ ಯಾವುದೇ ಆರ್ಥಿಕ ತೊಂದರೆಯಾಗದಂತೆ ಬೆಳೆಸಾಲ ನೀಡಲು ನೂತನ ಕೃಷಿ ಸಚಿವರು ಚೆಲುವನಾರಾಯಣ ಸ್ವಾಮಿ ಅವರು ಹೇಳಿದ್ದಾರೆ. ಅದೇ ರೀತಿ ಸರ್ಕಾರವು ಮುಂಬರುವ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಅಲ್ಪಾವಧಿ ಬೆಳೆ ಸಾಲದ ಮೊತ್ತವನ್ನು ಏರಿಕೆ ಮಾಡಿ ರೈತರಿಗೆ ಆರ್ಥಿಕ ಉತ್ತೇಜನ ನೀಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ.

ಯಾವ ರೈತರಿಗೆ ಎಷ್ಟು ಲಕ್ಷದವರೆಗೆ ಬಡ್ಡಿರಹಿತ ಸಾಲ ನೀಡುತ್ತಾರೆ?
ಸರ್ಕಾರವು ರೈತರಿಗೆ ಈಗ ಶೂನ್ಯ ಬಡ್ಡಿ ದರದ ಅಲ್ಪಾವಧಿ ಬೆಳೆ ಸಾಲದ ಗರಿಷ್ಠ ಮಿತಿಯನ್ನು 5 ಲಕ್ಷ ರೂ.ಗೆ ಹೆಚ್ಚಿಸುವ ಮಹತ್ವದ ನಿರ್ಧಾರವನ್ನು 2023-24ರ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಇದು ಹೊಸ ಆರ್ಥಿಕ ವರ್ಷದಿಂದ ಜಾರಿಗೆ ಬರಲಿದೆ. ಮುಖ್ಯಮಂತ್ರಿಯವರ ಈ ಘೋಷಣೆಯಿಂದ 30 ಲಕ್ಷಕ್ಕೂ ಹೆಚ್ಚು ರೈತರಿಗೆ ಅನುಕೂಲವಾಗಲಿದೆ. ಈ ಅಲ್ಪಾವಧಿ ಬೆಳೆ ಸಾಲ ವಿತರಣೆಗೆ 25 ಸಾವಿರ ಕೋಟಿ ರೂ. ಒದಗಿಸುವ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಶೂನ್ಯ ಬಡ್ಡಿ ದರದ ಸಾಲ ವಿತರಣೆ ಕಾರ್ಯಕ್ರಮ ಲಕ್ಷಾಂತರ ರೈತರ ಬದುಕಿನಲ್ಲಿ ಈಗಾಗಲೇ ಬೆಳಕು ಮೂಡಿಸಿದೆ. ಪ್ರತಿ ವರ್ಷವೂ ಮುಂಗಾರು ಹಂಗಾಮಿನಲ್ಲಿ ದೊರಕುವ ಈ ಸಾಲವು ರೈತರಿಗೆ ಆತ್ಮಸ್ಥೆರ್ಯ ತುಂಬುತ್ತಿದೆ. ನಿಶ್ಚಿಂತೆಯಿಂದ ಕೃಷಿ ಚಟುವಟಿಕೆ ಕೈಗೊಳ್ಳಲು ಅನುವು ಮಾಡಿಕೊಡುತ್ತಿದೆ. ಇದರ ಮೊತ್ತವನ್ನು 5 ಲಕ್ಷ ರೂ. ವರೆಗೆ ಹೆಚ್ಚಿಸುವ ಮೂಲಕ ನೂತನ ಕೃಷಿ ಸಚಿವರು ಇದರ ಬಗ್ಗೆ ಸಂಪೂರ್ಣ ಒಲವು ತೋರಿದ್ದಾರೆ.

5 ಲಕ್ಷ ಬಡ್ಡಿರಹಿತ ಸಾಲ ಎಲ್ಲಿ ದೊರೆಯುತ್ತದೆ? ಹೇಗೆ ಪಡೆಯಬೇಕು?
ರೈತರೇ ಸರ್ಕಾರವು ಈ 5 ಲಕ್ಷ ಬಡ್ಡಿರಹಿತ ಅಲ್ಪಾವಧಿ ಬೆಳೆ ಸಾಲವನ್ನು ನಿಮ್ಮ ಹತ್ತಿರದ ಬ್ಯಾಂಕ್ ಅಥವಾ ಸಹಕಾರಿ ಸಂಘ ಸಂಸ್ಥೆ ( ಸೊಸೈಟಿ) ಗಳಲ್ಲಿ ಫಾರ್ಮ್ ಅನ್ನು ತುಂಬಿ ಈ ಸಾಲವನ್ನು ಪಡೆಯಬಹುದು. ಹೊಲದ ಪಹಣಿ ಆಧಾರದ ಮೇಲೆ ಈ ಸಾಲವನ್ನು ನೀಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಬ್ಯಾಂಕ್ ಅಥವಾ ಸೊಸೈಟಿ ಗಳಲ್ಲಿ ಸಂಪರ್ಕಿಸಿ. ಪ್ರತಿಯೊಬ್ಬ ರೈತರೂ ಸಹ ಇದರ ಸದುಪಯೋಗ ಪಡೆದುಕೊಳ್ಳಬೇಕು. ಹಾಗೂ ಇದನ್ನು ಉಪಯೋಗಿಸಿ ಕೃಷಿಯಲ್ಲಿ ಮುಂದೆ ಸಾಗಬೇಕು.

ಕೃಷಿ ಸಾಲಕ್ಕೆ ಬೇಕಾಗುವ ಕಾಗದಪತ್ರಗಳು –

1. ಚಾಲ್ತಿ ಉತಾರ (RTC)
2. ಬ್ಯಾಂಕ ಸೆಟ್’ (ತಲಾಟಿ ಸೆಟ್) ಗ್ರಾಮ ಲೆಕ್ಕಾಧಿಕಾರಿಗಳಿಂದ ( ಖಾತೆ ಉತಾರ, ಹಾಥ ನಕಾಶ, ಪಂಚಮತಿ ಕಿಮ್ಮತ್ತು ಮತ್ತು ಬೇಬಾಕಿ ಪ್ರಮಾಣ ಪತ್ರಗಳು)
3. ಕೈಬರಹ ಉತಾರ 1990-91 ರಿಂದ 2000-01 ರವರೆಗೆ
4. ಕೈಬರಹ ಉತಾರದಲ್ಲಿರುವ ಎಲ್ಲ ಡೈರಿಗಳು
5. ಕಂಪ್ಯೂಟರ ಉತಾರ 2002-03 ರಿಂದ 2022-23 (ಇಲ್ಲಿಯವರೆಗೆ )
6. ಕಂಪ್ಯೂಟರ ಉತಾಗದಲ್ಲಿರುವ ಎಲ್ಲ ಎಮ್.ಆರ್.ಗಳು (M.R) ತಹಶೀಲ್ದಾರ ಆಫೀಸದಿಂದ
7. ಋಣಭಾರ ಪ್ರಮಾಣ ಪತ್ರ E.C (Encumbrance Certificate) 01-04-1990 ರಿಂದ 31-03-2004 ರವರೆಗೆ Sub-Registrar office ಮತ್ತು 01-04-2004 ರಿಂದ 2022-23( ಇಲ್ಲಿಯವರೆಗೆ) ONLINE
8. PKPS ಮತ್ತು ಇತರ ಬ್ಯಾಂಕ್‌ಗಳಿಂದ ಯಾವುದೇ ಬಾಕಿ ಪ್ರಮಾಣಪತ್ರಗಳಿಲ್ಲ.
9, ಖರೀದಿ’ ಪತ್ರ ಮತ್ತು ಅದರ ದೃಢೀಕರಣ ಪತ್ರ (Sale deed and certified copy ) ಅನ್ವಯಿಸಿದರೆ ಮಾತ್ರ
10. Reconveyance deed ಸಾಲ ಫೇಡಿ ಪತ್ರ ಅನ್ವಯಿಸಿದರೆ ಮಾತ್ರ.

Spread positive news

Leave a Reply

Your email address will not be published. Required fields are marked *