2025 ರ ಬೆಳೆವಿಮೆ ಅರ್ಜಿ ಆಹ್ವಾನ ಕೂಡಲೇ ಅರ್ಜಿ ಸಲ್ಲಿಸಿ

ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ 2023-24ನೇ ಸಾಲಿನ ಹಿಂಗಾರು ಹಾಗೂ ಬೇಸಿಗೆ ಹಂಗಾಮಿಗಾಗಿ ರೈತರು ಅಧಿಸೂಚಿತ ಬೆಳೆಗಳಿಗೆ ವಿಮೆ ಮಾಡಿಸಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ರೈತರು ನಿಗದಿತ ದಿನಾಂಕದೊಳಗೆ ಬೆಳೆವಿಮೆ ಪಾವತಿಸಿ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.

2025-26 ನೇ ಸಾಳಿನ ಮುಂಗಾರು ಬೆಳೆ ವಿಮೆ ಆರಂಭ. ರೈತರೇ ಕೂಡಲೇ ಬೆಳೆವಿಮೆ ಅರ್ಜಿ ಸಲ್ಲಿಸಿ ಬೆಳೆವಿಮೆ ಪಡೆಯಿರಿ. ಸೂಚನೆಗಳುಪ್ರತಿ ವರ್ಷದಂತೆ ಈ ವರ್ಷವು ಮುಂಗಾರು ಬೆಳೆ ವಿಮೆ ಆರಂಭವಾಗಲಿದ್ದು ಸುರಕ್ಷತೆ ಮತ್ತು ರೈತರಿಗೆ ಯಾವುದೆ ಅನ್ಯಾಯವಾಗದಿರಲು ವಿಮಾ ಹಣ ನೇರವಾಗಿ ನಿಮ್ಮ ಖಾತೆಗೆ ಜಮೆ ಆಗಲು ಸರಕಾರ ಕೆಲವು ಮಹತ್ವ ಬದಲಾವಣೆ ತಂದಿರುತ್ತದೆ.

ಕಳೆದ ವರ್ಷ ಮಳೆಯ ಚೆಲ್ಲಾಟದಿಂದಾಗಿ ರಾಜ್ಯಾದ್ಯಂತ ಭೀಕರ ಬರದ ಛಾಯೆ ಆವರಿಸಿತ್ತು. ರಾಜ್ಯದ ಬಹುತೇಕ ತಾಲ್ಲೂಕುಗಳು ಬರಪೀಡಿತ ಪಟ್ಟಿಗೆ ಸೇರಿದ್ದವು. ಈ ವರ್ಷ ಮುಂಗಾರು ಮಳೆ ಸಮೃದ್ಧವಾಗಿದೆ ಎಂಬ ಮಾಹಿತಿ ಇದೆಯಾದರೂ ಪ್ರಕೃತಿ ವಿಕೋಪಗಳನ್ನು ನಿಖರವಾಗಿ ಅಂದಾಜಿಸುವುದು ಕಷ್ಟಕರ. ಹೀಗಾಗಿ ರೈತರು ಕನಿಷ್ಟ ಮೊತ್ತ ಪಾವತಿಸಿ ಬೆಳೆವಿಮೆ ನೋಂದಣಿ ಮಾಡಿದರೆ ಮುಂಗಾರು ಬೆಳೆನಷ್ಟ ಪರಿಹಾರ ಪಡೆಯಲು ಅನುಕೂಲವಾಗಲಿದೆ.

ಬೆಳೆವಿಮೆ ಹೇಗೆ ಬರುತ್ತದೆ?

ವಿಮಾ ಸಂಸ್ಥೆಯಿಂದ ನೇಮಿಸಲ್ಪಟ್ಟ ನಷ್ಟ ನಿರ್ಧಾರಕರು ಮತ್ತು ಸ್ಥಳೀಯ ತಾಲ್ಲೂಕು/ಹೋಬಳಿ ಮಟ್ಟದ ಕಂದಾಯ, ಕೃಷಿ ಮತ್ತು ತೋಟಗಾರಿಕಾ ಇಲಾಖಾ ಅಧಿಕಾರಿಗಳು ಜಂಟಿಯಾಗಿ, ಹಾನಿಗೊಳಗಾದ ರೈತರ ಸಮ್ಮುಖದಲ್ಲಿ ಬೆಳೆ ನಷ್ಟವನ್ನು ನಿರ್ಧರಿಸತಕ್ಕದ್ದು. ಸದರಿ ಬೆಳೆ ನಷ್ಟದ ವರದಿಯನ್ನು ಜಿಲ್ಲೆಗಳ ಇಲಾಖಾ ಮುಖ್ಯಸ್ಥರು ಅನುಷ್ಠಾನ ವಿಮಾ ಸಂಸ್ಥೆಗಳಿಗೆ ನೇರವಾಗಿ ಸಲ್ಲಿಸಲು ಕ್ರಮ ಕೈಗೊಳ್ಳತಕ್ಕದ್ದು.

2025 ರ ಮುಂಗಾರು ಹಂಗಾಮಿನಲ್ಲಿ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲೇ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ (Post Harvest Losses) ಕಟಾವು ಕೈಗೊಳ್ಳುವ ಎರಡು ವಾರಗಳೊಳಗಾಗಿ (ಹದಿನಾಲ್ಕು ದಿನಗಳು) ಚಂಡಮಾರುತ, ಚಂಡಮಾರುತ ಸಹಿತ ಮಳೆ ಮತ್ತು ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾದರೆ ವೈಯಕ್ತಿಕವಾಗಿ (case to case basis) ವಿಮಾ ಸಂಸ್ಥೆಯು ನಮ್ಮ ನಿರ್ಧಾರ ಮಾಡಿ ಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲು ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಒಳಪಡಿಸಲಾಗಿದೆ.

ರೈತರು ಈ ಬಗ್ಗೆ ಸಂಬಂಧಪಟ್ಟ ಆರ್ಥಿಕ ಸಂಸ್ಥೆ ಅಥವಾ ಅನುಷ್ಠಾನಗೊಳಿಸುವ ವಿಮಾ ಸಂಸ್ಥೆಗಳ ಕಚೇರಿಗಳಿಗೆ ನೇರವಾಗಿ ಅಥವಾ ಕೃಷಿ/ತೋಟಗಾರಿಕೆ ಇಲಾಖೆಯ ಮೂಲಕ ತಕ್ಷಣ ಮಾಹಿತಿ (Intimation) ನೀಡಬೇಕು ಮತ್ತು ಯಾವುದೇ ಸಂದರ್ಭದಲ್ಲಿ ಬೆಳೆ ವಿಮೆಗೆ ನೋಂದಾಯಿಸಿದ ಬೆಳೆಯ ವಿವರಗಳನ್ನು ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣಗಳನ್ನು 72 ಗಂಟೆಯೊಳಗಾಗಿ ತಿಳಿಸತಕ್ಕದ್ದು.

ನಷ್ಟದ ಬಗೆಗಿನ ಮಾಹಿತಿಯನ್ನು ಸ್ವೀಕರಿಸಿದ ನಂತರ ವಿಮಾ ಸಂಸ್ಥೆಗಳು ಬೆಳೆ ನಷ್ಟವನ್ನು ನಿರ್ಧರಿಸುವುದಕ್ಕೆ ನಮ್ಮ ನಿರ್ಧಾರಕರನ್ನು ಸಂಬಂಧಪಟ್ಟ ಪ್ರದೇಶಕ್ಕೆ 48 ಗಂಟೆಯೊಳಗಾಗಿ ನಿಯೋಜಿಸತಕ್ಕದ್ದು. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ Prevented sowing/Planting Risk ನ್ನು ಬೆಳೆ ವಿಮಾ ಘಟಕವಾರು ಅಧಿಸೂಚಿಸಿ invoke ಮಾಡಿದ ನಂತರ ಒಂದು ತಿಂಗಳೊಳಗೆ ವಿಮಾ ಸಂಸ್ಥೆಯು ವಿಮೆಗೆ ನೋಂದಾಯಿಸಿದ ರೈತರಿಗೆ ಮೇಲಿನಂತೆ ಬೆಳೆ ವಿಮಾ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸತಕ್ಕದ್ದು.

2025-26 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಳೆ ಅಭಾವ ಅಥವಾ ಇತರೆ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಅಧಿಸೂಚಿತ ಘಟಕದಲ್ಲಿ ಶೇಕಡಾ 75 ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ (Prevented sowing/Planting Risk) ವಿಮಾ ಮೊತ್ತದ ಗರಿಷ್ಟ ಶೇಕಡಾ 25 ರಷ್ಟು ಪರಿಹಾರವನ್ನು ವಿಮಾ ಸಂಸ್ಥೆಯು ವಿಮೆ ಮಾಡಿಸಿದ ರೈತರಿಗೆ ಇತ್ಯರ್ಥಪಡಿಸಿ ಮುಂದಿನ ಅವಧಿಗೆ ವಿಮೆಯನ್ನು ರದ್ದುಪಡಿಸುವುದು.

ಈ ಸಂಬಂಧ ಬಿತ್ತನೆ ಕ್ಷೇತ್ರದ ವರದಿಯನ್ನು ಘೋಷಿಸಲು ಹಾಗೂ ಅಗತ್ಯ ದಾಖಲೆಗಳಾದ ಮಳೆ ಮತ್ತು ಇತರೆ ಹವಾಮಾನದ ವರದಿಯನ್ನು ನೀಡಲು ಜಿಲ್ಲೆಗಳ ಜಿಲ್ಲಾಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಇಂತಹ ಸಂದರ್ಭಗಳು ಉದ್ಭವವಾದಲ್ಲಿ ವಿಮಾ ಸಂಸ್ಥೆಯ ಪ್ರತಿನಿಧಿಗಳು ಹಾಗೂ ಇಲಾಖಾ ಅಧಿಕಾರಿಗಳು ಸೇರಿದಂತೆ ಮಾರ್ಗಸೂಚಿಯನ್ವಯ ಜಂಟಿ ಸಮೀಕ್ಷೆಯನ್ನು ಕೈಗೊಂಡು ವರದಿಯನ್ನು ಜಿಲ್ಲಾಧಿಕಾರಿಗಳ ಅನುಮೋದನೆಯೊಂದಿಗೆ Prevented sowing/Planting Risk invoke ಮಾಡುವ ಕೊನೆಯ ದಿನಾಂಕದ 07 ದಿನಗಳು ಮುಂಚಿತವಾಗಿ ಕೃಷಿ ಇಲಾಖೆಯ ಕೇಂದ್ರ ಕಛೇರಿಗೆ ನಿಗದಿತ ನಮೂನೆಯಲ್ಲಿ (ಅನುಬಂಧ-5 (a)) ಸಲ್ಲಿಸತಕ್ಕದ್ದು. ಜಿಲ್ಲೆಗಳಿಂದ ಪ್ರಸ್ತಾವನೆಗಳು ಸ್ವೀಕೃತವಾದ ನಂತರ, ಪ್ರಸ್ತಾವನೆಗಳನ್ನು ಮಾರ್ಗಸೂಚಿಯನ್ವಯ ಕೃಷಿ ಆಯುಕ್ತರ ಹಂತದಲ್ಲಿ ಪರಶೀಲಿಸಿ Prevented sowing/ Planting Risk ನ್ನು ಬೆಳೆ ವಿಮಾ ಘಟಕವಾರು ಅಧಿಸೂಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸತಕ್ಕದ್ದು.

ಬೇಕಾದ ದಾಖಲಾತಿಗಳು –

1. ಅರ್ಜಿ ನಮೂನೆಯಲ್ಲಿ ಬೆಳೆ ದಾಖಲಿಸಿ ರೈತರ ಸಹಿ ಮಾಡುವುದು.
2. ಎಫ್.ಐ.ಡಿ ಸಂಖ್ಯೆ
3. ರೈತರ ಪ್ರಸ್ತುತ ಆಧಾರ ಕಾರ್ಡ (ತಿದ್ದುಪಡಿ ಪರೀಕ್ಷಿಸಲು)
4. ಬ್ಯಾಂಕ ಪಾಸ್ ಬುಕ್
5. ಹೊಲದ RTC (ಪಹಣಿ ಪತ್ರಿಕೆ)
6. ಜಂಟಿ ಖಾತೆಗೆ ಒಪ್ಪಿಗೆ ಪತ್ರ
7. ನೇರವಾಗಿ ರೈತರೆ ಬಂದು ಬೆಳೆವಿಮೆ ನೋಂದಾಯಿಸಿಕೊಳ್ಳುವುದು.

Spread positive news

Leave a Reply

Your email address will not be published. Required fields are marked *