ಜಮೀನಿಗೆ ಹೋಗಲು ಅಕ್ಕ-ಪಕ್ಕದವರು ದಾರಿ ಬಿಡುತ್ತಿಲ್ಲವೇ..? ಬಂತು ಹೊಸ ರೂಲ್ಸ್‌

ರೈತರಿಗೆ ತಮ್ಮ ಜಮೀನಿಗೆ ಹೋಗಲು ದಾರಿಯಿಲ್ಲದೆ ಸಾಕಷ್ಟು ಕಷ್ಟ ಪಡುತ್ತಿರುತ್ತಾರೆ. ಜಮೀನು ಹತ್ತಿರವೇ ಇರುತ್ತದೆ. ಆದರೆ ಎತ್ತಿನ ಬಂಡಿ ಹೋಗುವ ದಾರಿಯಿಲ್ಲದೆ ಬಹಳಷ್ಟು ತೊಂದರೆ ಅನುಭವಿಸುತ್ತಿರುತ್ತಾರೆ. ಅದಲ್ಲದೆ ಆದರೆ ಕೆಲವರಿಗೆ ತಮ್ಮ ಜಮೀನಿಗೆ ಹೋಗಲು ದಾರಿಯೇ ಇಲ್ಲ. ಅಕ್ಕಪಕ್ಕದ ಜಮೀನುಗಳಿಗೆ ದಾರಿ ಮಾಡಿಕೊಡದೆ ತೊಂದರೆ ಕೊಡುತ್ತಾರೆ.ಆದರೆ ಸರ್ಕಾರ ಈ ಕುರಿತು ಹೊಸ ನಿಯಮಾವಳಿಗಳನ್ನು ಹೊರಡಿಸಿದೆ. ನೀವು ಭೂಮಿಯನ್ನು ಹೊಂದಿರುವಾಗ ಜಮೀನಿನಲ್ಲಿ ಕೃಷಿ ಕಾರ್ಯಾಚರಣೆಗಳು ಎಷ್ಟು ಮುಖ್ಯವೋ, ಕ್ಷೇತ್ರಕ್ಕೆ ಪ್ರವೇಶವನ್ನು ಖಚಿತಪಡಿಸಿಕೊಳ್ಳುವುದು ಅಷ್ಟೇ ಮುಖ್ಯ.

ರೈತರು ತಮ್ಮ ಕೃಷಿ ಪರಿಕರಗಳನ್ನು ಜಮೀನಿಗೆ ಒಯ್ಯಬೇಕು. ಆದರೆ ಸರಿಯಾದ ದಾರಿ ಇಲ್ಲದಿದ್ದರೆ ಸಾಧ್ಯವಿಲ್ಲ. ಅಕ್ಕಪಕ್ಕದ ರೈತರನ್ನು ದಾರಿ ಕೇಳಿದರೆ ಅವರು ನಿರಾಕರಿಸುತ್ತಾರೆ. ತೊಂದರೆ ಕೊಡಲು ಪ್ರಯತ್ನಿಸುತ್ತಾರೆ. ಇಂತಹ ಸಮಯದಲ್ಲಿ ನೀವು ಕಾನೂನಿನ ಆಶ್ರಯವನ್ನು ತೆಗೆದುಕೊಳ್ಳಬಹುದು. ಈ ಕಾಯಿದೆಯ ಮೂಲಕ ನಿಮ್ಮ ಭೂಮಿಗೆ ಪ್ರವೇಶವನ್ನು ಮಾಡಬಹುದು. ಜಮೀನಿನ ದಾರಿಯ ಬಗ್ಗೆ ಕಾನೂನು ವ್ಯವಸ್ಥೆಯಲ್ಲಿ ಕಾನೂನುಗಳಿವೆ.

ಸರಾಗಗೊಳಿಸುವ ಕಾಯಿದೆಯು ಅವಶ್ಯಕತೆಯ ಸುಲಭತೆಯನ್ನು ಸೂಚಿಸುತ್ತದೆ. ಕಾನೂನಿನ ನಿಯಮದ ಪ್ರಕಾರ.. ಯಾವುದೇ ಕ್ಷೇತ್ರವು ಮತ್ತೊಂದು ಕ್ಷೇತ್ರದ ಮುಂದೆ ಇರುವಾಗ ಹಿಂಬದಿ ಕ್ಷೇತ್ರಕ್ಕೆ ಬಿಟ್ಟುಕೊಡಬೇಕು ಇಲ್ಲದಿದ್ದರೆ ಪ್ರಕರಣ ದಾಖಲಿಸಬಹುದು. ಸರಾಗ ಕಾನೂನಿನ ಬಗ್ಗೆ ತಿಳಿದುಕೊಳ್ಳಬೇಕಾದ ಇನ್ನೊಂದು ಮುಖ್ಯ ವಿಷಯವೆಂದರೆ ಈ ಹಿಂದೆ ಆ ಜಮೀನಿಗೆ ರಸ್ತೆ ಇದ್ದು,

ಈಗ ಅದು ಮುಚ್ಚಿದ್ದರೆ ನೀವು ಅದರ ಬಗ್ಗೆ ಕೇಸ್‌ ದಾಖಲಿಸಬಹುದು. ಬೇರೆ ಜಮೀನಿಗೆ ಹೋಗಬೇಕಾದರೆ ದಾರಿ ಬಿಡಬೇಕು. ಇಲ್ಲದಿದ್ದರೆ ನೊಂದ ರೈತರು ಪ್ರಕರಣ ದಾಖಲಿಸಬಹುದು. ಟೆನೆನ್ಸಿ ಆಕ್ಟ್‌ನ ಸೆಕ್ಷನ್ 251 ನಿಮ್ಮ ಫಾರ್ಮ್‌ಗೆ ಹೋಗುವ ಹೊಸ ರಸ್ತೆಯನ್ನು ನಿರ್ಮಿಸಲು ನಿಮಗೆ ಅನುಮತಿಸುತ್ತದೆ.

ಯಾವುದೇ ಒಂದು ಜಮೀನಿಗೆ ಹೋಗಲು ಕಾಲುದಾರಿ ಆಗಿರಬಹುದು ಅಥವಾ ಬಂಡಿದಾರಿ ಇಲ್ಲದೇ ಇರುವ ಸಂದರ್ಭದಲ್ಲಿ ನಾಗರಿಕರು ಅಂದರೆ ರೈತರು ಏನು ಮಾಡಬೇಕು?

ಹೊಸದಾಗಿ ದಾರಿಯನ್ನು ಹೇಗೆ ಸೃಷ್ಟಿಸಬಹುದು? ದೂರನ್ನು ಎಲ್ಲಿ ಸಲ್ಲಿಸಬೇಕು?

ಅದಕ್ಕೆ ಬೇಕಾಗುವ ದಾಖಲೆಗಲೇನು?

ಅದಕ್ಕೆ ಸಿಗಬಹುದಾದ ಪರಿಹಾರ ಮಾರ್ಗಗಳೇನು? ಇವೆಲ್ಲವುಗಳ ಮಾಹಿತಿಯನ್ನು ಇಂದು ನಾವು ತಿಳಿದುಕೊಳ್ಳೋಣ.

ಕರ್ನಾಟಕ ರಾಜ್ಯ ಭೂ ಕಂದಾಯ ನಿಯಮದ ಕಾಯ್ದೆ ಪ್ರಕಾರ ಯಾವುದೇ ಒಂದು ಜಮೀನಿಗೆ ಹೋಗಿಬರಲು ಖಚಿತವಾದ ದಾರಿ ಇದ್ದೇ ಇರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಸಾಮಾನ್ಯವಾಗಿ ದಾರಿ ಇಲ್ಲದ ಜಮೀನು ಇಲ್ಲವೇ ಇಲ್ಲ ಎಂದು ಹೇಳಬಹುದು.

ಅನೇಕ ತಪ್ಪುಗಳಿಂದ ಇವತ್ತಿನ ಕಾಲದಲ್ಲಿ ಜಮೀನುಗಳಿಗೆ ಹೋಗಿ ಬರಲು ದಾರಿ ಅಂದರೆ ರಸ್ತೆಯು ರೈತರಿಗೆ ದೊಡ್ಡ ಸಮಸ್ಯೆಯಾಗಿ ಪರಿಗಣಿಸಿದೆ.

ಕೆಲವು ಜಮೀನುಗಳಿಗೆ ಅಧಿಕೃತವಾಗಿ ದಾರಿ ಇಲ್ಲದೆ ಹೆಣಗಾಡುತ್ತಿರುವ ರೈತರು ಮಾಡಬೇಕಾದ ಕೆಲಸ ಯಾವುದೆಂದರೆ,

» ಮೊದಲು ಪಕ್ಕದ ಜಮೀನಿನ ರೈತರ ಜೊತೆ ಪರಸ್ಪರ ಮಾತುಕತೆ ಮೂಲಕ ದಾರಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.

» ಮಾತುಕತೆ ಮೂಲಕ ಬಗೆಹರಿಯದಿದ್ದ ಪಕ್ಷದಲ್ಲಿ ಏನು ಮಾಡಬೇಕು ಎಂಬುದು ರೈತರಿಗೆ ದೊಡ್ಡ ಸಮಸ್ಯೆಯಾಗಿದೆ. ರೈತರಿಗೆ ಈಸೆಮೆಂಟ್(Easement) ಆಕ್ಟ್ ಪ್ರಕಾರ ನಿಮ್ಮ ಹಕ್ಕು ಪಡೆದುಕೊಳ್ಳುವುದಕ್ಕೆ ಅವಕಾಶವಿದೆ.

» ಈ ಹಕ್ಕನ್ನು ಪಡೆಯಲು ಅಂದರೆ ದಾರಿಯನ್ನು ಪಡೆಯಲು ಮುಖ್ಯವಾಗಿ ಏನೇನು ದಾಖಲೆಗಳು ಸಲ್ಲಿಸಬೇಕು ಎಂಬುದನ್ನು ನೋಡುವುದಾದರೆ,

1) ನಿಮ್ಮ ಹೊಲದ ಅಥವಾ ಜಮೀನಿನ ಪೂರ್ಣ ಸರ್ವೇ ನಂಬರ್ ನ ನಕ್ಷೆ.

2)ಸರ್ವೆ ನಕ್ಷೆಗಳನ್ನು ತಹಶೀಲ್ದಾರ್ ಆಫೀಸ್ನ ಸರ್ವೇ ಇಲಾಖೆಯ ಮೂಲಕ ಪಡೆದುಕೊಳ್ಳಬಹುದು.

3)ನಿಮ್ಮ ಸರ್ವೇ ನಂಬರ್ ನ ಆಜು ಬಾಜು ಅಂದರೆ ನಾಲ್ಕು ದಿಕ್ಕುಗಳಲ್ಲಿನ ಸರ್ವೆ ನಂಬರ್ ನಕ್ಷೆ.

4) ನಿಮ್ಮ ಸರ್ವೇ ನಂಬರ್ ನ ಕಾಲಕಾಲಕ್ಕೆ ಆದ ಟಿಪ್ಪಣಿಗಳು.

* ನಿಮ್ಮ ಹೊಲದ ಪಹಣಿ ಮತ್ತು ನಿಮ್ಮ ಆಧಾರ್ ಕಾರ್ಡ್ ನೀಡಬೇಕಾಗುತ್ತದೆ.

* ಎದುರುದಾರರ ಪಹಣಿ ಮತ್ತು ವಿಳಾಸ.

* ತಾಲೂಕು ಸರ್ವೆ ಕಚೇರಿಯಿಂದ ನಿಮ್ಮ ಜಮೀನಿಗೆ ದಾರಿ ಇಲ್ಲ ಎಂದು ಪ್ರಮಾಣ ಪತ್ರ ಪಡೆಯುವುದು ಕಡ್ಡಾಯವಾಗಿರುತ್ತದೆ.

* ಇದರ ಜೊತೆಗೆ ಜಮೀನಿಗೆ ಹೋಗಿ ಬರಲು ದಾರಿ ಇಲ್ಲ ಎಂದು ಸರಳವಾಗಿ ಒಂದು ಅರ್ಜಿ ಬರೆಯಬೇಕು.

ದಾರಿ ಪಡೆಯಲು ದಾಖಲೆಗಳನ್ನು ಎಲ್ಲಿ ಮತ್ತು ಯಾರಿಗೆ ಸಲ್ಲಿಸಬೇಕು? ಇದರ ಪ್ರಕ್ರಿಯೆ ಹೇಗಿರುತ್ತದೆ? ಎಂಬುದನ್ನು ತಿಳಿದುಕೊಳ್ಳೋಣ.

# ಈ ಮೇಲೆ ಹೇಳಿರುವ ಎಲ್ಲಾ ದಾಖಲೆಗಳನ್ನು ಲಗತ್ತಿಸಿ ನಿಮ್ಮ ಜಿಲ್ಲೆಯಲ್ಲಿರುವ DDLR ಕಚೇರಿಗೆ ದೂರಿನ ರೂಪದಲ್ಲಿ ಸಲ್ಲಿಸಬೇಕಾಗುತ್ತದೆ.

# DDLR ಕಚೇರಿಗೆ ಸಲ್ಲಿಸಿದ ಬಳಿಕ ಆ ಕಚೇರಿ ಇಂದ ಆಗುವ ಸಾಧ್ಯತೆಗಳನ್ನು ತಿಳಿದುಕೊಳ್ಳಬೇಕು.

# ನೀವು ಕೊಟ್ಟಿರುವ ಅರ್ಜಿಗೆ ಅನುಗುಣವಾಗಿ ಹೊಸದಾಗಿ ಪುನಃ ಸರ್ವೇ ಮಾಡಲು ಅದೀಶಿಸಬಹುದು.

ಅಥವಾ ರೆವೆನು ಇನ್ಸ್ಪೆಕ್ಟರ್ ಮತ್ತು ವಿಲ್ಲೇಜ್(Village Accountant) ಅಕೌಂಟ್ ಟೆಂಟ್ ಅವರ ಮೂಲಕ ವರದಿ ಕೇಳಬಹುದು.

# ಆ ವರದಿಯ ಆಧಾರೀಸಿ ಎದುರುದಾರರಿಗೆ ನೋಟೀಸ್ ಹೊರಡಿಸಲಾಗುತ್ತದೆ.

# ಇವರೆಲ್ಲರ ಹೇಳಿಕೆಗಳನ್ನು ಆಧಾರಿಸಿ ಹೊಸದಾಗಿ ದಾರಿ ಸೃಷ್ಟಿಸಲು ಅದೇಶಿಸಬಹುದು.

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ ಕೆಲವು ಸಂದರ್ಭಗಳಲ್ಲಿ ಸ್ವತಃ ಮಾನ್ಯ ಅಧಿಕಾರಿಗಳೇ ಸ್ಥಳ ಪರಿಶೀಲನೆಗೆ ಬರಬಹುದು

Spread positive news

Leave a Reply

Your email address will not be published. Required fields are marked *