ಎಕರೆಗೆ 175 ಟನ್ ಕಬ್ಬಿನ ಇಳುವರಿ ತೆಗೆದ ಯುವ ರೈತ.

ಪ್ರೀಯ ರೈತರೇ ಇವತ್ತು ನಾವು ಹಾಕಿರುವ ಈ ವಿಷಯವನ್ನು ಸಂಪೂರ್ಣವಾಗಿ ಓದಿ. ವಿಜಯಪುರ ಜಿಲ್ಲೆಯ ಅಹಿರಸಂಗ ಗ್ರಾಮದ ರೈತ ಶ್ರೀಮಂತ ಇಂಡಿ ಅವರು ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು 172 ಟನ್ ಕಬ್ಬು ಬೆಳೆದು ₹4.5 ಲಕ್ಷ ಲಾಭ ಪಡೆದಿದ್ದಾರೆ.

ಈ ಬೃಹತ್ ಇಳುವರಿಯ ಹಿಂದೆ ವೈಜ್ಞಾನಿಕ ಕೃಷಿ ಕ್ರಮಗಳ ಕೈ ಚಳಕವಿದೆ. ಇವರು Co-86032 (Nira) ಎಂಬ ಉತ್ತಮ ತಳಿಯ ಕಬ್ಬನ್ನು ಆಯ್ಕೆ ಮಾಡಿಕೊಂಡಿದ್ದರು. ಸಾಲುಗಳ ನಡುವೆ 5 ರಿಂದ 6 ಅಡಿಗಳಷ್ಟು ಹೆಚ್ಚಿನ ಅಂತರ ಬಿಡುವುದರಿಂದ ಕಬ್ಬಿನ ಕಾಂಡಗಳು ದಪ್ಪಗಾಗಲು ಮತ್ತು ಸೂರ್ಯನ ಬೆಳಕು ಹಾಗೂ ಗಾಳಿ ಸರಿಯಾಗಿ ಸಿಗಲು ಸಹಕಾರಿಯಾಯಿತು. ಮುಖ್ಯವಾಗಿ ಹನಿ ನೀರಾವರಿ (Drip Irrigation) ಪದ್ಧತಿಯ ಮೂಲಕ ನೀರು ಮತ್ತು ದ್ರವ ರೂಪದ ಗೊಬ್ಬರವನ್ನು (Fertigation) ನೇರವಾಗಿ ಗಿಡದ ಬುಡಕ್ಕೆ ನೀಡುವ ಮೂಲಕ ಪೋಲಾಗದಂತೆ ನಿರ್ವಹಣೆ ಮಾಡಿದ್ದಾರೆ.

ಕಬ್ಬು ಒಂದು ಪ್ರಮುಖ ವಾಣಿಜ್ಯ ಬೆಳೆ ಮತ್ತು ಹುಲ್ಲು ಜಾತಿಯ ಸಸ್ಯವಾಗಿದೆ. ಇದು ಬೆಲ್ಲ ಮತ್ತು ಸಕ್ಕರೆ ಉತ್ಪಾದನೆಗೆ ಮುಖ್ಯ ಕಚ್ಚಾ ವಸ್ತುವಾಗಿದ್ದು, ವಿಶ್ವದ ಸಕ್ಕರೆ ಉತ್ಪಾದನೆಯ ಸುಮಾರು 67-68% ಭಾಗವನ್ನು ಪೂರೈಸುತ್ತದೆ. ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವ ಕಬ್ಬಿನ ರಸ (Sugarcane juice) ಉತ್ತಮ ಪಾನೀಯವಾಗಿದ್ದು, ಹೆಚ್ಚಿನ ಶಕ್ತಿ ನೀಡುತ್ತದೆ.

ಸೂಕ್ತ ಪರಿಸ್ಥಿತಿಗಳಲ್ಲಿ ಅತ್ಯಧಿಕ ಕಬ್ಬಿನ ಇಳುವರಿ ಸಾಮಾನ್ಯವಾಗಿ ಎಕರೆಗೆ 150-167 ಟನ್ (ಸುಮಾರು 370–410 ಟನ್/ಹೆಕ್ಟೇರ್) ಮೀರುತ್ತದೆ, ವಿಶೇಷ ಪ್ರಭೇದಗಳಾದ Co 0238, Co 86032, ಮತ್ತು Co 18009 ಹೆಚ್ಚಿನ ಕಾರ್ಯಕ್ಷಮತೆಗಾಗಿ ಜನಪ್ರಿಯವಾಗಿವೆ. ಈ ಇಳುವರಿಯನ್ನು ಸಾಧಿಸಲು ಪ್ರಮುಖ ಅಂಶಗಳು ಸುಧಾರಿತ ಮಣ್ಣಿನ ಫಲವತ್ತತೆ, ಅತ್ಯುತ್ತಮ ನೀರಾವರಿ ಮತ್ತು ಆರಂಭಿಕ ಋತುವಿನ ನಿರ್ವಹಣೆ.

ಟಾಪ್ ಹೈ-ಇಳುವರಿ ಪ್ರಭೇದಗಳು –

Co 0238: ಉತ್ತರ ಭಾರತದಲ್ಲಿ ಹೈ-ಇಳುವರಿ ವಿಧವೆಂದು ಗುರುತಿಸಲ್ಪಟ್ಟಿದೆ, ಸರಾಸರಿ ಹೆಚ್ಚಿನ ಕಬ್ಬಿನ ಇಳುವರಿ ಮತ್ತು ಸಕ್ಕರೆ ಚೇತರಿಕೆ.
Co 86032: ಹೆಚ್ಚಿನ ಇಳುವರಿ ಮತ್ತು ಸಕ್ಕರೆ ಅಂಶಕ್ಕೆ ವ್ಯಾಪಕವಾಗಿ ಹೊಂದಿಕೊಳ್ಳುತ್ತದೆ, ಸಾಮಾನ್ಯವಾಗಿ 100 ಟನ್/ಎಕರೆಗಿಂತ ಹೆಚ್ಚು ಇಳುವರಿ ನೀಡುತ್ತದೆ.
Co 18009, Co 11015, Co 14012: ICAR-SBI ಶಿಫಾರಸು ಮಾಡಿದ ಆಧುನಿಕ, ಹೈ-ಇಳುವರಿ, ರೋಗ-ನಿರೋಧಕ ಪ್ರಭೇದಗಳು.
CoSi 98071: ಹೆಚ್ಚಿನ ಇಳುವರಿ ನೀಡುವ ವಿಧ (ಸುಮಾರು 144.7 ಟನ್/ಹೆ).

ಕಬ್ಬು ನಮ್ಮ ದೇಶ ಹಾಗೂ ರಾಜ್ಯದ ಆರ್ಥಿಕ ಮತ್ತು ಕಾರ್ಖಾನೆ ಆಧಾರಿತ ವಾಣಿಜ್ಯ ಬೆಳೆಯಾಗಿದ್ದು ದೇಶದ ಅರ್ಥವ್ಯವಸ್ಥೆಗೆ ಇದರ ಕೊಡುಗೆ ಅಪಾರ. ಬೆಳೆಯ ಕಾಲಾವಧಿ 12 ರಿಂದ 18 ತಿಂಗಳು. ಕುಳೆ(Ratoon) ಬೆಳೆಯನ್ನು ಸೇರಿಸಿ ಒಟ್ಟು 3-4 ವರ್ಷಗಳ ಕಾಲ ಭೂಮಿಯಲ್ಲಿ ಇರುವಂತಹ ಬೆಳೆ ಇದಾಗಿದ್ದು ಸುಮಾರು 228 ಕ್ಕೂ ಹೆಚ್ಚು ಪೀಡೆಗಳು ಕಂಡುಬರುತ್ತವೆ. ಇದರಲ್ಲಿ 20 ಕ್ಕೂ ಹೆಚ್ಚು ಕೀಟಗಳು ನಮ್ಮ ದೇಶದಲ್ಲಿ ಬಾಧಿಸುತ್ತವೆ. ಇವುಗಳಿಂದ ಸುಮಾರು 20% ಕಬ್ಬಿನ ಇಳುವರಿ ಹಾಗೂ 15% ಸಕ್ಕರೆ ಇಳುವರಿ ಕಡಿಮೆಯಾಗಿದ್ದು ಕಂಡು ಬಂದಿದೆ. ಕೀಟಗಳ ಬಾಧೆ ಹಾಗೂ ಅವುಗಳ ಸಮರ್ಪಕ ನಿರ್ವಹಣೆ ಮಾಡದೆ ಇರುವುದು ಈ ಪ್ರಮಾಣದ ನಷ್ಟಕ್ಕೆ ಕಾರಣವಾಗಿದೆ.

ಕಬ್ಬಿನ ಪ್ರಮುಖ ಕೀಟಗಳೆಂದರೆ ಸಸಿ ಕೊರೆಯುವ ಕೀಟ, ಗಣಿಕೆ ಕೊರೆಯುವ ಹುಳು, ಬಿಳಿ ಉಣ್ಣೆ ಹೇನು(wooly aphids), ಹಿಟ್ಟು ತಿಗಣೆ, ಗೆದ್ದಲು (termides)ಹಾಗೂ ಗೊಣ್ಣೆ ಹುಳು. ಈ ಎಲ್ಲ ಕೀಟಗಳು ಕಬ್ಬಿನ ಇಳುವರಿ ಮೇಲೆ ಪರಿಣಾಮ ಬೀರುತ್ತವೆ. ಕಬ್ಬಿನ ಕೀಟಗಳ ನಿರ್ವಹಣೆಯಲ್ಲಿ ರಾಸಾಯನಿಕ ಕೀಟನಾಶಕಗಳ ಬಳಕೆ ಇತರೆ ಬೆಳೆಗಳಿಗೆ ಹೋಲಿಸಿದರೆ ಕಡಿಮೆ. ಮತ್ತು ಎಲ್ಲಾ ಹಂತದಲ್ಲಿ ಎಲ್ಲಾ ಕೀಟಗಳನ್ನು ನಿಯಂತ್ರಿಸಲು ರಾಸಾಯನಿಕ ಕೀಟನಾಶಕಗಳನ್ನು ಬಳಸುವುದು ಅಸಾಧ್ಯ. ಆದ್ದರಿಂದ ಸಮಗ್ರ ಕೀಟ ನಿರ್ವಹಣಾ ಪದ್ಧತಿಗಳನ್ನು ಅನುಸರಿಸಬೇಕಾಗುತ್ತದೆ.

Spread positive news

Leave a Reply

Your email address will not be published. Required fields are marked *