
ಗೃಹಲಕ್ಷ್ಮಿ ಹಣ ಯಾವಾಗ ಸಾರ್ ಎಂದರೆ ಸಿಎಂ ಸಿದ್ದರಾಮಯ್ಯ ಏನಂದ್ರು ನೋಡಿ?
ಗೃಹಲಕ್ಷ್ಮಿ ಹಣ ಮೂರು ತಿಂಗಳಿನಿಂದ ಜಮೆ ಆಗಿಲ್ಲ. ಯಾವಾಗ ಜಮೆ ಆಗುತ್ತದೆ ಎಂದು ಇಂದು ಮಾಧ್ಯಮಗಳು ಪ್ರಶ್ನಿಸಿದಾಗ ಸಿಎಂ ಸಿದ್ದರಾಮಯ್ಯ ಏನು ಹೇಳಿದರು ಗೊತ್ತಾ? ಕಳೆದ ಮೂರು ತಿಂಗಳಿನಿಂದ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆ ಹಣ ಕ್ರೆಡಿಟ್ ಆಗಿಲ್ಲ. ಫಲಾನುಭವಿಗಳು ಈಗಾಗಲೇ ತಮ್ಮ ಬ್ಯಾಂಕ್ ಖಾತೆಗಳನ್ನು ಚೆಕ್ ಮಾಡಿ ಸೋತಿದ್ದಾರೆ. ಯೋಜನೆಯ ಪ್ರಕಾರ ಸರ್ಕಾರ ಪ್ರತೀ ತಿಂಗಳೂ ಮಹಿಳೆಯರ ಖಾತೆಗೆ 2,000 ರೂ. ಹಣ ಜಮೆ ಮಾಡಬೇಕಿತ್ತು. ಆದರೆ ಮೂರು ತಿಂಗಳಿನಿಂದ ಹಣ ಬಂದಿಲ್ಲ….