ತೋಟಗಾರಿಕೆ ಇಲಾಖೆ ಆವರಣದಲ್ಲಿ ಮಾವು ಮೇಳ; ವೈವಿಧ್ಯಮಯ ತಳಿ ಪ್ರದರ್ಶನ ಮಾವು ಬೆಳೆಗಾರರಿಂದ ನೇರ ಖರೀದಿಗೆ ಅವಕಾಶ ಮಾವು ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ₹7 ಕೋಟಿ ಅನುದಾನ ಮಂಜೂರಾಗಿದ್ದು, ತಾಲ್ಲೂಕಿನ ಕುಂಭಾಪುರ ಗ್ರಾಮದಲ್ಲಿ ಜಾಗ ಗುರುತಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು.
ಧಾರವಾಡ ಜಿಲ್ಲೆಯಲ್ಲಿ ಮಾವು ಒಂದು ಪ್ರಮುಖ ಬೆಳೆಯಾಗಿದ್ದು, ಒಟ್ಟು 29,610 ಎಕರೆ, ಅಂದಾಜು 8,881 ರೈತರು ಮಾವು ಬೆಳೆಯುತ್ತಿದ್ದಾರೆ, ಸಾಂಪ್ರದಾಯಕವಾಗಿ 4 ಟನ್, ಎಕರೆ ಇಳುವರಿ ಬರುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಇಳುವರಿಯಲ್ಲಿ ಕುಂಠಿತವಾಗಿದ್ದು ಸುಮಾರು 1 ಟನ್, ಎಕರೆಯಂತೆ ಜಿಲ್ಲೆಯಿಂದ ಒಟ್ಟು 29,000 ಟನ್ ಇಳುವರಿಯನ್ನು ಅಂದಾಜಿಸಬಹುದಾಗಿದೆ” ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಮಾವಿನ ಮೇಳ:
ಧಾರವಾಡ ಜಿಲ್ಲೆಯು ಸಾಂಪ್ರದಾಯಕವಾಗಿ ಮಾವು ಬೆಳೆಯುವ ರಾಜ್ಯದ ಮುಖ್ಯ ಭಾಗವಾಗಿದ್ದು, ಪ್ರಮಖವಾಗಿ ಧಾರವಾಡ, ಕಲಘಟಗಿ, ಹುಬ್ಬಳ್ಳಿ ಮತ್ತು ಕುಂದಗೋಳ ತಾಲೂಕುಗಳಲ್ಲಿ ಮಾವು ಬೆಳೆಯನ್ನು ಬೆಳೆಯಲು ಸೂಕ್ತವಾದ ವಾತಾವರಣವಿರುವುದರಿಂದ ಉತ್ತಮ ಮಾವು ಬೆಳೆಯನ್ನು ಬೆಳೆಯಬಹುದಾಗಿದೆ.
ಮಾವು ಮೇಳಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಾವು ಅಭಿವೃದ್ಧಿ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿ ಶೀಘ್ರದಲ್ಲಿ ಆರಂಭವಾಗಲಿದೆ. ಈ ಕೇಂದ್ರದಲ್ಲಿ ಶೈತ್ಯಾಗಾರ, ಹಣ್ಣು ಮಾಗಿಸುವ ಮತ್ತು ಗುಣಮಟ್ಟ ಅಧರಿಸಿ ಹಣ್ಣು ವಿಂಗಡಿಸುವ ಘಟಕ, ಬೆಳೆಗಾರರಿಗೆ ಮಾವು ಬೆಳೆ ತರಬೇತಿ, ಮಾಹಿತಿ ನೀಡಲು ವ್ಯವಸ್ಥೆ ಕಲ್ಪಿಸಲಾಗುವುದು’ ಎಂದರು.
ಧಾರವಾಡದ ತೋಟಗಾರಿಕೆ ಇಲಾಖೆ ಆವರಣದಲ್ಲಿ ನಡೆದ ಮಾವು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಜಿಲ್ಲಾಧಿಕಾರಿ ದಿವ್ಯಪ್ರಭು ಉದ್ಘಾಟಿಸಿದರು ಪ್ರದೇಶದಲ್ಲಿ ಮಾವು ಇದೆ. ಸುಮಾರು ಒಂಬತ್ತು ಸಾವಿರ ಬೆಳೆಗಾರರು ಇದ್ದಾರೆ. ಈ ವರ್ಷ ಹವಾಮಾನ ವೈಪರೀತ್ಯದಿಂದ ಇಳುವರಿ ಕಡಿಮೆಯಾಗಿದೆ. ಎಕರೆಗೆ ಸುಮಾರು . 2.9 ಲಕ್ಷ ಕ್ವಿಂಟಲ್ ಫಸಲು ಇದೆ ಎಂದು ಅಂದಾಜಿಸಲಾಗಿದೆ’ ಎಂದರು.
ಮಿಯಾ ಜಾಕಿ ತಳಿ!
‘ಮಿಯಾ ಜಾಕಿ ತಳಿಯ ಮಾವಿನ ಹಣ್ಣನ್ನು ಒಬ್ಬರು ರೈತರು ಬೆಳೆದಿದ್ದಾರೆ. ಈ ತಳಿ ಹಣ್ಣು ತೀವ್ರ ಕಡಿಮೆ ಇರುವುದರಿಂದ ಬೆಲೆ ಹೆಚ್ಚು ಇದೆ. ಈ ತಳಿ ಮಾವು ಬೆಳೆದಿರುವ ಪ್ರಮೋದ ಗಾಂಷ್ಕರ ತೋಟದಲ್ಲಿ ಶೀಘ್ರದಲ್ಲಿ ಕ್ಷೇತ್ರೋತ್ಸವ ಆಯೋಜಿಸಿ ಇತರ ಬೆಳೆಗಾರರಿಗೂ ಈ ತಳಿಯ ಬಗ್ಗೆ ಮಾಹಿತಿ ನೀಡಲು ಉದ್ದೇಶಿಸಲಾಗಿದೆ’ ಎಂದು ತಿಳಿಸಿದರು.
ಇದು ವೋರಿಯಾದ ಅತ್ಯಂತ ದುಬಾರಿ ಮಾವು, ಕೆಲವೊಮ್ಮೆ ಒಂದು ಕೆಜಿಗೆ 2.7 ಲಕ್ಷದಷ್ಟು ಸಿಗುತ್ತದೆ. ಜಪಾನ್ನ ಕ್ಯುಶು ದ್ವೀಪದ ಮಿಯಾಜಾಕಿ ಮಾವಿನ ಹಣ್ಣುಗಳು ದೊಡ್ಡ ಕೆಂಪು ಮೊಟ್ಟೆಗಳನ್ನು ಹೋಲುತ್ತವೆ – ಮಧ್ಯಪ್ರದೇಶದ ಹಣ್ಣಿನ ತೋಟಗಾರ ದಂಪತಿಗಳು ಹಣ್ಣಿನ ಮರವನ್ನು ಕಾಪಾಡಲು ನಾಲ್ವರು ಭದ್ರತಾ ಸಿಬ್ಬಂದಿ ಮತ್ತು ಆರು ನಾಯಿಗಳನ್ನು ನೇಮಿಸಿಕೊಂಡಿದ್ದಾರೆ ಎಂಬ ಸುದ್ದಿ ಬಂದಾಗಿನಿಂದ ಭಾರತದಲ್ಲಿ ಟ್ರೆಂಡಿಂಗ್ ಆಗಿದೆ.
ಆದರೆ, ಮಿಯಾಝಾಕಿ ಮಾವಿನ ಜಾದೂ ಈಗ ಮಧ್ಯಪ್ರದೇಶದಿಂದ ಸ್ವಲ್ಪ ದೂರದಲ್ಲಿ ರಾಜಸ್ಥಾನದ ಕೋಟಾ ಬಳಿಯ ಬರಡು ಮರುಭೂಮಿಯಲ್ಲಿ ತೆರೆದುಕೊಳ್ಳಲು ಸಜ್ಜಾಗಿದೆ. ಇಲ್ಲಿ, ಮಾಧ್ಯಮದ ಪ್ರಖರತೆಯಿಂದ ದೂರ, ಭಾರತದ ಕೋಚಿಂಗ್ ಹಬ್ನಿಂದ ಸುಮಾರು 15 ಕಿಮೀ ದೂರದಲ್ಲಿರುವ ಗಿರ್ಧರ್ಪುರದ ಸಣ್ಣ ತೋಟದಲ್ಲಿ ಮೂರು ಸಣ್ಣ ಸಸಿಗಳನ್ನು ಪೋಷಿಸಲಾಗುತ್ತಿದೆ.
ಈ ಸಸಿಗಳನ್ನು ಸಾಕುತ್ತಿರುವವರು ರೈತ ಮತ್ತು ತೋಟಗಾರಿಕಾ ತಜ್ಞ ಶ್ರೀಕಿಶನ್ ಸುಮನ್, ವರ್ಷವಿಡೀ ಫಲ ನೀಡುವ ನಿತ್ಯಹರಿದ್ವರ್ಣ ಮಾವಿನ ಸದಬಹಾರ್ನ ಸೃಷ್ಟಿಕರ್ತ ಎಂದು ಕೃಷಿ ವಲಯಗಳಲ್ಲಿ ಚಿರಪರಿಚಿತರಾಗಿದ್ದಾರೆ.
ಮೂರು ವರ್ಷಗಳ ಹಿಂದೆ ಥಾಯ್ಲೆಂಡ್ನಿಂದ ಅತ್ಯಲ್ಪ ಬೆಲೆಗೆ ಖರೀದಿಸಿದ ಮೂರು ಮಿಯಾಜಾಕಿ ಮಾವಿನ ಸಸಿಗಳನ್ನು ಅವರ ಸ್ನೇಹಿತ ಸಿದ್ಧಾರ್ಥ್ ರೈ ಸುಮನ್ಗೆ ನೀಡಿದ್ದರು. ಜಪಾನ್ ಮೂಲದ ಮೂರು ಗಿಡಗಳು ಸುಮನ್ ಅವರ ತೋಟದಲ್ಲಿ ಕಳೆದ ಮೂರು ವರ್ಷಗಳಿಂದ ಸುಮಾರು ನಾಲ್ಕು ಅಡಿಗಳಷ್ಟು ಬೆಳೆದು ವರ್ಷಕ್ಕೆ ಒಂದು ಅಡಿ ಗಳಿಸಿ ತಲಾ ಮೂರು ಹಣ್ಣುಗಳನ್ನು ನೀಡುತ್ತಿವೆ.
ಗಣ್ಯ ಆಹ್ವಾನಿತರು
ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ, ಹಾಪ್ಕಾಮ್ಸ್ ಅಧ್ಯಕ್ಷ ಸಿದ್ದಣ್ಣಪ್ಯಾಟಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಮಲ್ಲನಗೌಡ ಪಾಟೀಲ, ಕೃಷಿ ಇಲಾಖೆ ಉಪ ನಿರ್ದೇಶಕ ಕೆ.ಸಿ.ಭದ್ರಣ್ಣವರ, ಹಿರಿಯ ತೋಟಗಾರಿಕೆ ನಿರ್ದೇಶಕ ಇಮ್ಮಿಯಾಜ್ ಚಂಗಾಪುರಿ, ಕೃಷಿಕ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ತಮ್ಮಣ್ಣ ಗುಂಡಗೋವಿ ಇದ್ದರು.