ಈ ಶ್ರಮ ಕಾರ್ಡ್ ನಿಂದ ರೈತರಿಗೆ ದೊರೆಯುವ ಯೋಜನೆಗಳ ಪಟ್ಟಿ.

ಪ್ರೀಯ ರೈತರೇ ಇವತ್ತು ನಾವು ಕೇಂದ್ರ ಸರ್ಕಾರದ ಕಡೆಯಿಂದ ಈ ಶ್ರಮ ಕಾರ್ಡ್ ಬಗ್ಗೆ ಹಾಗೂ ಈ ಶ್ರಮ ಕಾರ್ಡ್ ಇರುವುದರಿಂದ ರೈತರಿಗೆ ದೊರೆಯುವ ಹಲವಾರು ಯೋಜನೆಗಳ ಬಗ್ಗೆ ಮಾಹಿತಿ ತಿಳಿಯೋಣ. ಹಾಗೂ ಯಾವ ಯಾವ ರೈತರಿಗೆ ಯಾವ ಯೋಜನೆ ಲಭ್ಯವಾಗುತ್ತದೆ ಹಾಗೂ ರೈತರಿಗೆ ಸಿಗುವ ಸಂಪೂರ್ಣ ಸಬ್ಸಿಡಿ ಯೋಜನೆಗಳ ಪಟ್ಟಿ ಹಾಗೂ ಅರ್ಜಿ ಸಲ್ಲಿಸುವುದು ಹೇಗೇ? ಅರ್ಜಿ ಎಲ್ಲಿ ಸಲ್ಲಿಸಬೇಕು? ಎಂದು ತಿಳಿಯೋಣ.

ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್-ಧನ್ ಯೋಜನೆ(PM shram yojana) –
* ಸ್ವಯಂಪ್ರೇರಿತ ಮತ್ತು ಕೊಡುಗೆ ಪಿಂಚಣಿ ಯೋಜನೆಗಳು
* ಫಲಾನುಭವಿಯ ಪ್ರವೇಶದ ವಯಸ್ಸನ್ನು ಅವಲಂಬಿಸಿ ಮಾಸಿಕ ಕೊಡುಗೆ ರೂ. 55 ರಿಂದ ರೂ. 200ರ ವರೆಗೆ ಇರುತ್ತದೆ.
* ಈ ಯೋಜನೆಗಳ ಅಡಿಯಲ್ಲಿ, 50 ಪ್ರತಿಶತ ಮಾಸಿಕ ಕೊಡುಗೆಯನ್ನು ಫಲಾನುಭವಿಯು ಪಾವತಿಸಬೇಕಾಗುತ್ತದೆ ಮತ್ತು ಸಮಾನವಾದ ಕೊಡುಗೆಯನ್ನು ಕೇಂದ್ರ ಸರ್ಕಾರವು ಪಾವತಿಸುತ್ತದೆ.

ಅರ್ಹತೆ –
* ಭಾರತೀಯ ಪ್ರಜೆಯಾಗಿರಬೇಕು
* ಅಸಂಘಟಿತ ಕಾರ್ಮಿಕರು (ಬೀದಿ ಬದಿ ವ್ಯಾಪಾರಿಗಳು, ಕೃಷಿ ಸಂಬಂಧಿತ ಕೆಲಸಗಳು, ನಿರ್ಮಾಣ ಸ್ಥಳದ ಕಾರ್ಮಿಕರು, ಚರ್ಮ, ಕೈಮಗ್ಗ, ಮಧ್ಯಾಹ್ನದ ಊಟ, ರಿಕ್ಷಾ ಅಥವಾ ಆಟೋ ಚಕ್ರಗಳು, ಚಿಂದಿ ಆಯ್ದುಕೊಳ್ಳುವಿಕೆ.
* ವಯೋಮಿತಿ 18-40 ವರ್ಷಗಳು
* ಮಾಸಿಕ ಆದಾಯವು 15,000 ರೂಪಾಯಿಗಳಿಗಿಂತ ಕಡಿಮೆಯಿರುತ್ತದೆ ಮತ್ತು ಇಪಿಎಫ್‌ಒ/ಇಎಸ್‌ಐಸಿ/ಎನ್ಸಿಎಸ್‌ (ಸರ್ಕಾರಿ ಅನುದಾನಿತ) ಸದಸ್ಯರಲ್ಲ.

ಯೋಜನೆ ಪ್ರಯೋಜನಗಳು –
* 60 ವರ್ಷ ವಯಸ್ಸನ್ನು ತಲುಪಿದ ನಂತರ, ಫಲಾನುಭವಿಗಳು ಮಾಸಿಕ 3000/- ರೂ ಪಿಂಚಣಿಯನ್ನು ಪಡೆಯಲು ಅರ್ಹರಾಗಿರುತ್ತಾರೆ.
* ಫಲಾನುಭವಿಯ ಮರಣದ ನಂತರ, ಸಂಗಾತಿಯು 50 ಪ್ರತಿಶತ ಮಾಸಿಕ ಪಿಂಚಣಿಗೆ ಅರ್ಹರಾಗಿರುತ್ತಾರೆ.
* ಗಂಡ ಮತ್ತು ಹೆಂಡತಿ ಇಬ್ಬರೂ ಈ ಯೋಜನೆಗೆ ಸೇರಿದರೆ, ಅವರು ರೂ. 6000/- ಮಾಸಿಕ ಪಿಂಚಣಿ ಜಂಟಿಯಾಗಿ ಈ ಯೋಜನೆ ಲಾಭ ದೊರೆಯುತ್ತದೆ.
* ಫಲಾನುಭವಿಯ ಇದರ ಸದುಪಯೋಗ ಪಡೆದುಕೊಳ್ಳಬೇಕು. ಹಾಗೂ ರೈತರಿಗೆ ಇದೊಂದು ಉತ್ತಮ ಯೋಜನೆ ಆಗಿದೆ.

ಪ್ರಧಾನ ಮಂತ್ರಿ ಕಿಸಾನ್ ಮಾನ್ಧಾನ್ ಯೋಜನೆ –
ಯೋಜನೆ ಅರ್ಹತೆಗಳು –

* ಭಾರತೀಯ ಪ್ರಜೆಯಾಗಿರಬೇಕು.
* ಈ ಯೋಜನೆ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅನುಕೂಲ ಆಗುತ್ತದೆ.
* ಪ್ರವೇಶದ ವಯಸ್ಸು 18 ರಿಂದ 40 ವರ್ಷಗಳು ಹೊಂದಿರಬೇಕು.
* ಸಂಬಂಧಿತ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಭೂ ದಾಖಲೆಗಳ ಪ್ರಕಾರ 2 ಹೆಕ್ಟೇರ್ ವರೆಗೆ ಕೃಷಿ ಭೂಮಿ

ಯೋಜನೆ ಪ್ರಯೋಜನಗಳು –
* ಪಿಂಚಣಿ ಖಾತರಿಪಡಿಸಿದ ರೂ. 3000/- ತಿಂಗಳು ದೊರೆಯುತ್ತದೆ.
* ಸ್ವಯಂಪ್ರೇರಿತ ಮತ್ತು ಕೊಡುಗೆ ಪಿಂಚಣಿ ಯೋಜನೆ ದೊರೆಯುತ್ತದೆ.
* ಗವರ್ನ್ಮಂಟ್ ಒಎಫ್ ಇಂಡಿಯಾದಿಂದ ಹೊಂದಾಣಿಕೆಯ ಕೊಡುಗೆ.

ಅರ್ಹತಾ ಮಾನದಂಡ ಹಾಗೂ ಅಗತ್ಯ ದಾಖಲೆಗಳು:-
* ವಯೋಮಿತಿ 18 ವರ್ಷ ಮೇಲ್ಪಿಟ್ಟಿರಬೇಕು.
* ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
ಜಿಲ್ಲೆಯಲ್ಲಿ ದಮನಿತ ಮಹಿಳೆಯರ ಪುನರ್ವಸತಿಗಾಗಿ ಹಾಗೂ ಸರ್ಕಾರದಿಂದ ಅಧೀಕೃತವಾಗಿ ಗುರುತಿಸಲಾಗಿರುವ ಸಂಸ್ಥೆಯಿಂದ ಅಧೀಕೃತ ದೃಢೀಕರಣ ಪತ್ರ / ಗುರುತಿನ ಚೀಟಿ ಹೊಂದಿರಬೇಕು
* ಆಧಾರ್‍ ಕಾರ್ಡ್
* ವಾಸ ಸ್ಥಳ ದೃಢೀಕರಣ ಪತ್ರ / ಮತದಾರರ ಗುರುತಿನ ಚೀಟಿ / ಪಡಿತರ ಚೀಟಿ
* ಬ್ಯಾಂಕ್‍ ಖಾತೆಗೆ ಆಧಾರ್‍ ಸೀಡಿಂಗ್‍ ಮಾಡಿಸಿರಬೇಕು
ಕೈಗೊಳ್ಳಲು ಉದ್ದೇಶಿಸಿರುವ ಆದಾಯೋತ್ಪನ್ನ ಚಟುವಟಿಕೆಗೆ ಸಂಬಂಧಿಸಿದಂತೆ ಯೋಜನಾ ವರದಿ ನೀಡಬೇಕು.

ಹೆಚ್ಚಿನ ಮಾಹಿತಿಗಾಗಿ ನೀವು ಇಲ್ಲಿ ನೀಡಲಾದ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://www.myscheme.gov.in/ ಇದರಲ್ಲಿ ನಿಮಗೆ ಬೇಕಾದ ಎಲ್ಲಾ ಯೋಜನೆ ಮಾಹಿತಿ ಪಡೆಯಬಹುದು.

Spread positive news

Leave a Reply

Your email address will not be published. Required fields are marked *